ದಾವಣಗೆರೆ ಸೋಲು: ಬಿಜೆಪಿ ಪ್ರಮುಖರಿಗೆ ಮಾಹಿತಿಯಿತ್ತ ಜಿಲ್ಲಾ ಮುಖಂಡರ ನಿಯೋಗ
Jun 16 2024, 01:52 AM ISTಬಿಜೆಪಿ ಚುನಾವಣಾ ಚಾಣಕ್ಯ, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಗೆಲುವಿನ ಕ್ಷೇತ್ರಗಳ ಪಟ್ಟಿಯಲ್ಲಿದ್ದ ದಾವಣಗೆರೆ ಲೋಕಸಭಾ ಕ್ಷೇತ್ರ ಸೋತಿದ್ದನ್ನು ಸ್ವತಃ ಅಮಿತ್ ಶಾ ಗಂಭೀರವಾಗಿ ಪರಿಗಣಿಸಿದ್ದಾರೆ. ಸೋಲಿಗೆ ಕಾರಣಗಳ ಪಟ್ಟಿ ಸಮೇತ ಇದೀಗ ಪಕ್ಷದ ಜಿಲ್ಲಾ ಮುಖಂಡರ ನಿಯೋಗವು ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್, ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ವಿವರಣೆ ನೀಡಿದೆ.