ಶ್ರೇಷ್ಠ ರಾಜಕಾರಣಿಗಳು ಸದನದಲ್ಲಿ ಮಾಡುವ ಭಾಷಣ ಸಾಹಿತ್ಯ ಯಾಕೆ ಆಗಬಾರದು, ರಾಜಕಾರಣಿಗಳ ಮಾತು ಸಹಿತ ಕೃತಿಗಳನ್ನು ಸಾಹಿತ್ಯ ಎಂದು ಪರಿಗಣಿಸದೇ ಇರುವುದು ದುರಾದೃಷ್ಟಕರ
ಅಖಿಲ ಭಾರತ ಕನ್ನಡ ಸಾಹಿತ್ಯ ಸಾಹಿತ್ಯ ಸಮ್ಮೇಳನದ ಉದ್ಘಾಟನಾ ಸಮಾರಂಭದಲ್ಲಿ ಸಮ್ಮೇಳನದ ಸರ್ವಾಧ್ಯಕ್ಷ ಗೊರುಚ ಅವರು ಕನ್ನಡ ಭಾಷೆಯನ್ನು ತಂತ್ರಜ್ಞಾನಕ್ಕೆ ಹೊಂದಿಸುವ ಅನಿವಾರ್ಯತೆ ಹಾಗೂ ತಂತ್ರಜ್ಞಾನದ ಜತೆ ಕನ್ನಡವನ್ನು ಜೋಡಿಸಿ ಸಶಕ್ತಗೊಳಿಸುವ ಕುರಿತು ನಾಲ್ಕು ಮಹತ್ವದ ಸಲಹೆಗಳನ್ನು ನೀಡಿದ್ದಾರೆ.
ಆತಿಥ್ಯಕ್ಕೆ ಮಂಡ್ಯ ಹೆಸರುವಾಸಿ ಎಂಬುದನ್ನು ಸಾಹಿತ್ಯ ಸಮ್ಮೇಳನ ಸಾಬೀತುಪಡಿಸಿದೆ. ರುಚಿಕಟ್ಟಾದ ಊಟ, ಅಚ್ಚುಕಟ್ಟಾದ ವ್ಯವಸ್ಥೆ ಜನಮೆಚ್ಚುಗೆಗೆ ಪಾತ್ರವಾಗಿದೆ.
ಕನ್ನಡ ನೆಲದಲ್ಲಿ ಹುಟ್ಟಿ ಸಾಹಿತ್ಯ ಲೋಕವನ್ನು ಬೆಳಗಿದ ಆರ್.ನರಸಿಂಹಾಚಾರ್, ಬಿ.ಎಂ.ಶ್ರೀ, ಪು.ತಿ.ನರಸಿಂಹಾಚಾರ್, ಎ.ಎನ್.ಮೂರ್ತಿರಾವ್, ಕೆ.ಎಸ್.ನರಸಿಂಹಸ್ವಾಮಿ, ಡಾ.ಹೆಚ್.ಎಲ್.ನಾಗೇಗೌಡ, ಪ್ರೊ.ಜಿ.ವೆಂಕಟಸುಬ್ಬಯ್ಯ ಅವರು ಸಮ್ಮೇಳನದ ಅಧ್ಯಕ್ಷರಾಗಿ ಮಂಡ್ಯ ಜಿಲ್ಲೆಗೆ ಗರಿ ಮೂಡಿಸಿದ್ದಾರೆ.