ವಚನ ಸಾಹಿತ್ಯ ಎಲ್ಲಾ ಭಾಷೆಗಳಿಗೂ ಅನುವಾದವಾಗಬೇಕು: ಪ್ರೊ.ಆರ್‌.ವಿ.ಎಸ್‌. ಸುಂದರಂ

Apr 03 2024, 01:34 AM IST
111 ವರ್ಷ ಬದುಕಿದಂತಹ ನಡೆದಾಡುವ ದೇವರು ಎಂದೆನಿಸಿಕೊಂಡ ಶ್ರೀ ಶಿವಕುಮಾರ ಸ್ವಾಮಿಗಳು ಸಿದ್ದಗಂಗೆಯನ್ನು ಕರ್ಮಭೂಮಿಯನ್ನಾಗಿ ತಪೋಭೂಮಿಯನ್ನಾಗಿ ಮಾಡಿಕೊಂಡಿದ್ದರು. ಶ್ರೀಗಳು ಪರರ ಒಳಿತನ್ನು ಬಯಸಿದವರು 10,000 ಮಕ್ಕಳಿಗೆ ಸಿದ್ದಗಂಗೆಯಲ್ಲಿ ವಿದ್ಯಾಭ್ಯಾಸವನ್ನು ವಸತಿಯ ಜೊತೆಗೆ ಯಾವುದೇ ಶುಲ್ಕವಿಲ್ಲದೆ ನೀಡಿದವರು. ನಾವು ಇಂಥವರ ನಡುವೆ ಬದುಕಿದ್ದೆವು ಎನ್ನುವುದು ನಮ್ಮ ಪುಣ್ಯ. ಬಸವಣ್ಣನವರ ಫೋಟೋ ಜೊತೆಗೆ ಶ್ರೀಗಳ ಭಾವಚಿತ್ರವನ್ನು ಕೂಡ ಇತ್ತೀಚಿನ ದಿನಗಳಲ್ಲಿ ನಾವು ನೋಡುತ್ತೇವೆ ಎಂದರೆ ಅಂತಹ ಮಹಾನ್ ವ್ಯಕ್ತಿಯ ನಡುವೆ ಬದುಕಿದ್ದ ನಾವು ಅವರ ಅಂಶಗಳನ್ನು ಕೆಲವೊಂದಾದರೂ ರೂಢಿಸಿಕೊಳ್ಳಬೇಕು