ಚನ್ನರಾಯಪಟ್ಟಣ ಪುರಸಭೆ ಉಪಾಧ್ಯಕ್ಷೆಯಾಗಿ ಕವಿತಾ ರಾಜು ಆಯ್ಕೆ

Jul 26 2025, 12:00 AM IST
ಚನ್ನರಾಯಪಟ್ಟಣದಲ್ಲಿ ಹಿಂದುಳಿದ ವರ್ಗದ ಮತದಾರರು ಹೆಚ್ಚಿದ್ದು ಅದನ್ನು ಪರಿಗಣಿಸಿ ಅಧಿಕಾರ ನೀಡಿದ ಶಾಸಕ ಸಿ. ಎನ್. ಬಾಲಕೃಷ್ಣ ಹಾಗೂ ಸದಸ್ಯರಿಗೆ ಧನ್ಯವಾದಗಳು ಎಂದು ನೂತನ ಪುರಸಭಾ ಉಪಾಧ್ಯಕ್ಷೆ ಕವಿತರಾಜು ತಿಳಿಸಿದರು. ಪಟ್ಟಣದ ಪುರಸಭೆಗೆ ಉಪಾಧ್ಯಕ್ಷರಾಗಿ ವಾರ್ಡ್ ನಂ.೧೬ರ ಸದಸ್ಯೆ ಕವಿತಾ ರಾಜು ಅವರನ್ನು ಅವಿರೋಧವಾಗಿ ಆಯ್ಕೆಯಾದ ಹಿನ್ನೆಲೆಯಲ್ಲಿ ಅವರು ಮಾತನಾಡಿ, ಉಪಾಧ್ಯಕ್ಷ ಸ್ಥಾನ ನೀಡಿದ ಕ್ಷೇತ್ರದ ಶಾಸಕರಾದ ಸಿ. ಎನ್. ಬಾಲಕೃಷ್ಣ ಅವರಿಗೆ ಮತ್ತು ಅಧ್ಯಕ್ಷರಿಗೆ, ಉಪಾಧ್ಯಕ್ಷರಿಗೆ ಎಲ್ಲ ಸದಸ್ಯರಿಗೆ ಧನ್ಯವಾದಗಳನ್ನು ಆರ್ಪಿಸುತ್ತೇನೆ. ಹಿಂದುಳಿದ ವರ್ಗದ ಗಾಣಿಗ ಸಮುದಾಯದ ಒಬ್ಬ ಸಾಮಾನ್ಯ ಮಹಿಳೆಗೆ ಈ ಹುದ್ದೆ ದೊರಕಿರುವುದು ಸಂತೋಷದ ವಿಚಾರ ಎಂದರು.