ಕರ್ನಲ್ ಸೋಫಿಯಾ ಖುರೇಶಿ ಮತ್ತು ವಿಂಗ್ ಕಮಾಂಡರ್ ವ್ಯೋಮಿಕಾ ಸಿಂಗ್ ಅವರ ಬಗ್ಗೆ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪದ ಮೇಲೆ ಹರ್ಯಾಣದ ಅಶೋಕ ವಿವಿಯ ಪ್ರಾಧ್ಯಾಪಕರನ್ನು ಬಂಧಿಸಲಾಗಿದೆ.
ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ಜವಳಿ ಕಾರ್ಖಾನೆಯಲ್ಲಿ ಬೆಂಕಿ ಅವಘಡ ಸಂಭವಿಸಿದ್ದು, ಇದರಿಂದಾಗಿ ಒಂದುವರೆ ವರ್ಷದ ಮಗು ಸೇರಿ 8 ಜನರು ದುರ್ಮರಣ ಹೊಂದಿದ್ದಾರೆ.
ಇಲ್ಲಿನ ಈಸ್ಟ್ ನದಿಯಲ್ಲಿ ಸಾಗುತ್ತಿದ್ದ ಮೆಕ್ಸಿಕೋದ ನೌಕಾಪಡೆಯ ಹಡಗೊಂದು 142 ವರ್ಷ ಹಳೆ ಬ್ರೂಕ್ಲಿನ್ ಸೇತುವೆಯ ಅಡಿ ಸಾಗುವ ವೇಳೆ ಅದಕ್ಕೆ ಡಿಕ್ಕಿ ಹೊಡೆದ ಘಟನೆ ಶನಿವಾರ ರಾತ್ರಿ ನಡೆದಿದೆ. ಘಟನೆಯಲ್ಲಿ 22 ಜನರು ಗಾಯಗೊಂಡಿದ್ದು, ಈ ಪೈಕಿ ಇಬ್ಬರು ಸಾವನ್ನಪ್ಪಿದ್ದಾರೆ.
ಭಾರತದ ವಿರೋಧದ ನಡುವೆಯೂ ಉಗ್ರಪೋಷಕ ಪಾಕಿಸ್ತಾನಕ್ಕೆ 8,500 ಕೋಟಿ ಹಣಕಾಸು ನೆರವು ನೀಡಲು ನಿರ್ಧರಿಸಿರುವ ಅಂತಾರಾಷ್ಟ್ರೀಯ ಹಣಕಾಸು ನಿಧಿ (ಐಎಂಎಫ್) ಕೊನೆಗೂ ಎಚ್ಚೆತ್ತುಕೊಂಡಂತೆ ಕಾಣುತ್ತಿದೆ.
ಬೇಹುಗಾರಿಕೆ, ಕಣ್ಗಾವಲು ಸೇರಿದಂತೆ ಹಲವು ಉದ್ದೇಶಗಳಿಗೆ ಮಹತ್ವದ್ದಾದ ಭೂಪರಿವೀಕ್ಷಣಾ ಉಪಗ್ರಹ (ಇಒಎಸ್-09) ಉಡ್ಡಯನ ವಿಫಲವಾಗಿದೆ. ಉಪಗ್ರಹ ಹೊತ್ತುಕೊಂಡು ಯಶಸ್ವಿಯಾಗಿ ಮೇಲೇರಿದ ಕೆಲವೇ ನಿಮಿಷಗಳಲ್ಲಿ ಪಿಎಸ್ಎಲ್ವಿ ರಾಕೆಟ್ನ ಮೂರನೇ ಹಂತದಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡು ಉಡ್ಡಯನ ವಿಫಲ
ಟರ್ಕಿ ಇದೀಗ, ಬಾಂಗ್ಲಾದೇಶದಲ್ಲೂ ಹೊಸ ಭಾರತ ವಿರೋಧಿ ಆಟ ಆಡಲು ಮುಂದಾಗಿದೆ. ಟರ್ಕಿ ಬೆಂಬಲಿತ ಇಸ್ಲಾಂ ಮೂಲಭೂತವಾದಿಗಳ ಎನ್ಜಿಒವೊಂದು ಭಾರತದ ಈಶಾನ್ಯ ಮತ್ತು ಪೂರ್ವದ ಹಲವು ರಾಜ್ಯಗಳನ್ನು ಸೇರಿಸಿ ಗ್ರೇಟರ್ ಬಾಂಗ್ಲಾದೇಶ್ ಪರಿಕಲ್ಪನೆ ಹುಟ್ಟುಹಾಕಿದೆ.