ಡಿಸಿಸಿ ಯಾರಪ್ಪನ ಆಸ್ತಿ ಅಲ್ಲ, ಜನರ ಆಸ್ತಿಡಿಸಿಸಿ ಬ್ಯಾಂಕ್ ಯಾರ ಅಪ್ಪನ ಮನೆ ಆಸ್ತಿಯೂ ಅಲ್ಲ. ಎಂದೆಂದಿಗೂ ಜನರ ಆಸ್ತಿ. ಮುಂದೆಯೂ ಜನರ ಆಸ್ತಿ ಆಗಿಯೇ ಇರಲಿದೆ. ಹುಕ್ಕೇರಿ ಫಲಿತಾಂಶ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ಪುನರಾವರ್ತನೆ ಆಗುವುದನ್ನು ಜಿಲ್ಲೆಯ ಜನತೆ ನಿರ್ಧರಿಸಲಿದ್ದು, ಈ ಬಾರಿ ಡಿಸಿಸಿ ಬ್ಯಾಂಕ್ ಚುನಾವಣೆಯಲ್ಲಿ ನಾಯಕತ್ವ ತೆಗೆದುಕೊಳ್ಳುವ ಅವಶ್ಯಕತೆ ನನಗಿಲ್ಲ ಎಂದು ಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ ರಮೇಶ ಕತ್ತಿ ಹೇಳಿದರು.