ಬಿರಾದಾರ ದಂಪತಿಯ ಸೇವೆ ಅನನ್ಯಕನ್ನಡಪ್ರಭ ವಾರ್ತೆ ಅಥಣಿನೊಂದವರ, ನೆಲೆಯಿಲ್ಲದವರ ಬಾಳಿಗೆ ವೃದ್ಧಾಶ್ರಮಗಳು ಅಶಾಕಿರಣವಾಗಿವೆ. ಅಥಣಿಯಲ್ಲಿ ಸುಖನ್ಯಾ ವೃದ್ಧಾಶ್ರಮವು ನೊಂದವರ ಹೆಗಲಾಗಿ ಕೆಲಸ ಮಾಡುತ್ತಿದ್ದು, ಬಿರಾದಾರ ದಂಪತಿಯ ಸೇವೆ ಮೆಚ್ಚುವಂತಹುದು ಎಂದು ಶಾಸಕ ಲಕ್ಷ್ಮಣ ಸವದಿ ಮೆಚ್ಚುಗೆ ವ್ಯಕ್ತಪಡಿಸಿದರು.ಪಟ್ಟಣದ ತಮ್ಮ ನಿವಾಸದಲ್ಲಿ ಅಥಣಿ -ಚಮಕೇರಿ ರಸ್ತೆಯ ಭರಮಖೋಡಿಯಲ್ಲಿ ಜೂ.19 ರಂದು ನಡೆಯುವ ಸುಕನ್ಯಾ ವೃದ್ಧಾಶ್ರಮದ ವಾರ್ಷಿಕೋತ್ಸವ ಮತ್ತು ಅಪ್ಪ ಪ್ರಶಸ್ತಿ ಪ್ರದಾನದ ಬಿತ್ತಿ ಪತ್ರ ಬಿಡುಗಡೆ ಮಾಡಿ ಮಾತನಾಡಿದರು.