ಪ್ರಭು ಶ್ರೀರಾಮನ ಕಳಸ ಮೆರವಣಿಗೆ, ಮಂತ್ರಾಕ್ಷತೆ ಕಾರ್ಯ ಅದ್ಧೂರಿಕೋಟ್ಯಂತರ ಭಾರತೀಯರ ಕನಸು ನನಸಾಗುವ ಕಾಲ ಸನ್ನಿಹವಾಗಿದ್ದು, ಅಯೋಧ್ಯೆಯಲ್ಲಿ ಜ.22ರಂದು ಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮನ ಭವ್ಯ ಮಂದಿರ ಉದ್ಘಾಟನೆ ಹಾಗೂ ಪ್ರಾಣ ಪ್ರತಿಷ್ಠಾಪನೆ ಕಾರ್ಯಕ್ರಮ ಅದ್ಧೂರಿಯಾಗಿ ಜರುಗಲಿದೆ. ಅದಕ್ಕೂ, ಪೂರ್ವ ಪ್ರತಿ ಮನೆಗೂ ಅಯೋಧ್ಯೆಯ ಮಂತ್ರಾಕ್ಷತೆ ತಲುಪಿಸುವ ಕಾರ್ಯ ಮಾಡಲಾಗುತ್ತಿದೆ ಎಂದು ಸುರೇಶ ಯಾದವ ಫೌಂಡೇಶನ್ ಅಧ್ಯಕ್ಷ ಸುರೇಶ ಯಾದವ ಹೇಳಿದರು.