ಕಾಲುಸಂಕದ ಹೊರತು ಚಟ್ಕುಣಿ ಗ್ರಾಮಕ್ಕೆ ದಾರಿಯೇ ಇಲ್ಲಶೃಂಗೇರಿ , ಸ್ವಾತಂತ್ರ್ಯ ಬಂದು 75 ವರ್ಷಗಳು ಕಳೆದರೂ, ಸುವರ್ಣ ಸ್ವಾತಂತ್ರ್ಯೋತ್ಸವ ಸಂಭ್ರಮ ಆಚರಿಸಿಕೊಂಡರೂ ಇಲ್ಲಿನ ಗ್ರಾಮಸ್ಥರು ಕಾಲುಸಂಕದಲ್ಲಿಯೇ ಓಡಾಡುತ್ತಿದ್ದಾರೆ. ಬೇರೆ ಸೇತುವೆಯೂ ಇಲ್ಲ. ಅಡಕೆ ಮರದ ತುಂಡುಗಳು, ಮರದ ದಿಮ್ಮಿಗಳು, ಬೀಳು, ಮರದ ಕಂಬಗಳಿಂದ ಸ್ವಯಂ ನಿರ್ಮಿತ ಕಾಲು ಸಂಕದ ಮೇಲೆ ನಿತ್ಯ ಗ್ರಾಮಸ್ಥರ ಓಡಾಟ. ಆದರೂ ಅಧಿಕಾರಿಗಳಾಗಲೀ, ಜನಪ್ರತಿನಿಧಿಗಳಾಗಲೀ, ಸರ್ಕಾರವಾಗಲೀ ಇತ್ತ ಕಣ್ಣು ಹಾಯಿಸಿಯೇ ಇಲ್ಲ.