ಹವಾಮಾನ ವೈಪರೀತ್ಯದಿಂದ ರೈತರು ತತ್ತರ: ಡಾ. ಶ್ರೀನಿವಾಸ್ಮೂಡಿಗೆರೆ, ಪ್ರಸ್ತುತ ದಿನಗಳಲ್ಲಿ ಹವಾಮಾನ ವೈಪರೀತ್ಯದಿಂದ ರೈತರು ಮತ್ತು ಬೆಳೆಗಾರರು ತತ್ತರಿಸುತ್ತಿದ್ದಾರೆ. ಮಳೆ ಕೈಕೊಟ್ಟು ಬೆಳೆ ಕೈ ಸಿಗದೇ ಅನ್ನದಾತ ಆರ್ಥಿಕ ಹೊಡೆತಕ್ಕೆ ಸಿಲುಕಿ ಕಂಗೆಟ್ಟಿದ್ದಾನೆ. ಆದರೆ ಈ ಕೋಕೋ ಎಂಬ ಬೆಳೆ ನೀರು, ಗೊಬ್ಬರ ವಿಲ್ಲದೇ, ಸಾವಯವದಲ್ಲಿ ವಿವಿಧ ಬೆಳೆ ಬೆಳೆದು ಯಶಸ್ಸು ಕಾಣಲು ಸಾಧ್ಯ ಎಂದು ತೋಟಗಾರಿಕಾ ಮಹಾವಿದ್ಯಾಲಯದ ಡೀನ್ ಡಾ.ಶ್ರೀನಿವಾಸ್ ಹೇಳಿದರು.