ಆತ್ಮದಲ್ಲಿ ಪರಮಾತ್ಮನನ್ನು ಕಾಣಬೇಕು : ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳ್ಮೂಡಿಗೆರೆ, ಆತ್ಮ ಪರಮಾತ್ಮರ ಮಧ್ಯ ಇರುವಂತಹ ವೇದ ಕಲ್ಪನೆ ಇದೆ. ಅದರ ಅನುಷ್ಠಾನ ಈ ಕ್ಷೇತ್ರದಲ್ಲಿ ನಡೆಯುತ್ತಿದೆ. ಸನಾತನ ಧರ್ಮದಲ್ಲಿ ನಮ್ಮ ಕ್ಷೇತ್ರಗಳು ಯಾವುದೇ ರೀತಿ ಜಾತಿ ಬೇಧವಿಲ್ಲದೆ ಮೇಲು ಕೀಳು ಭಾವವಿಲ್ಲದೆ ಬಡವ ಬಲ್ಲಿದ ಎನ್ನದೆ ನಮ್ಮ ಸಮಾಜ ಒಟ್ಟಾಗುವ ಕೇಂದ್ರ ಧಾರ್ಮಿಕ ಕೇಂದ್ರಗಳು ಎಂದು ಕಾಸರಗೋಡುವಿನ ಶ್ರೀಶಂಕರಾಚಾರ್ಯ ಸಂಸ್ಥಾನ ಶ್ರೀ ಎಡನೀರು ಮಠದ ಪೀಠಾಧಿಪತಿ ಶ್ರೀ ಸಚ್ಚಿದಾನಂದ ಭಾರತೀ ಶ್ರೀಪಾದಂಗಳವರು ನುಡಿದರು.