ಸೇನೆ ಕರೆದರೆ ಇಂದೇ ಗಂಟು-ಮೂಟೆ ಕಟ್ಟಲು ನಾವು ಸಿದ್ಧ: ಪ್ರಕಾಶ್ ಶೆಟ್ಟಿಚಿಕ್ಕಮಗಳೂರು, ಪೆಹಲ್ಗಾಮ್ ನಲ್ಲಿ ಧರ್ಮ ಕೇಳಿ ಶೂಟ್ ಮಾಡಿದ್ದು ಅತ್ಯಂತ ನೋವಾಗಿದೆ. ನಾನು ಜಮ್ಮು- ಕಾಶ್ಮೀರದಲ್ಲಿ ಮುಸ್ಲಿಂ ಹೆಣ್ಣು ಮಗಳ ಮದುವೆಗೆ ಕಾವಾಲಾಗಿ ನಿಂತಿದ್ದೆ, ಇಡೀ ರಾತ್ರಿ ನಿದ್ದೆ ಇಲ್ದೆ ಕಾವಾಲು ಕಾದಿದ್ದೇವೆ. ಅವರಿಗೂ ಕೂಡ ಉಗ್ರವಾದಿಗಳ ಭಯವಿತ್ತು. ಅದಕ್ಕೆ ಇಡೀ ರಾತ್ರಿ ಕಾದಿದ್ದೇವೆ ಎಂದು 13 ವರ್ಷ ಜಮ್ಮು-ಕಾಶ್ಮೀರದಲ್ಲಿ ಸೈನಿಕ ಸೇವೆ ಸಲ್ಲಿಸಿರುವ ಮಾಜಿ ಸೈನಿಕ ಪ್ರಕಾಶ್ ಶೆಟ್ಟಿ ಹೇಳಿದ್ದಾರೆ.