ಮಹಿಳೆ ಅಡುಗೆ ಮನೆಗೆ ಸೀಮಿತಳೆಂಬುದು ಹಳಸು ಮಾತುಮಹಿಳೆ ಅಡುಗೆ ಮನೆಗೆ ಸೀಮಿತಳೆಂಬುದು ಈಗ ಹಳಸು ಮಾತು. ಆಧುನಿಕ ಜಗತ್ತಿನಲ್ಲಿ ಆಕೆ ಎಲ್ಲ ರಂಗಗಳಲ್ಲಿಯೂ ಸಬಲಳು ಎಂಬುದನ್ನು ಸಾಬೀತುಪಡಿಸಿದ್ದಾಳೆಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಿಲ್ಲಾ ನಿರ್ದೇಶಕ ದಿನೇಶ್ ಪೂಜಾರಿ ಹೇಳಿದರು. ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ದಿ ಯೋಜನೆ ಸಿರಿಗೆರೆ ಯೋಜನಾ ಕಚೇರಿ ವ್ಯಾಪ್ತಿಯ ಗುತ್ತಿನಾಡು ವಲಯದ ಸೀಬಾರ ಕಾರ್ಯಕ್ಷೇತ್ರದಲ್ಲಿ ಸರಸ್ವತಿ ನೂತನ ಜ್ಞಾನವಿಕಾಸ ಕೇಂದ್ರ ಉದ್ಘಾಟಿಸಿ ಅವರು ಮಾತನಾಡಿದರು.