ಭಕ್ತರು ತೋರಿದ ಔದಾರ್ಯದಿಂದ ಮನ ತುಂಬಿದೆ: ತರಳಬಾಳು ಶ್ರೀಈ ಬಾರಿ ಹುಣ್ಣಿಮೆಯನ್ನು ಭರಮಸಾಗರದಲ್ಲಿ ಆಚರಿಸಬೇಕಾಗಿತ್ತು. ಮಳೆ, ಬೆಳೆ ಇಲ್ಲದೆ ಜನರು ಸಂಕಷ್ಟದಲ್ಲಿರುವ ಸಡಗರ ಬೇಡವೆಂದು ಸಿರಿಗೆರೆಯಲ್ಲಿ ಮೂರು ದಿನ ಆಚರಿಸಲು ನಿರ್ಧರಿಸಿದೆವು.ಬರ ಆವರಿಸಿದೆ. ಜನರು ಸಂಕಷ್ಟದಲ್ಲಿದ್ದಾರೆ. ಅವರೇ ಸಂಕಷ್ಟದಲ್ಲಿದ್ದರೂ ನಾವು ನೀಡಿದ ಕರೆಗೆ ಸ್ಪಂದನೆ ನೀಡಿ ತರಳಬಾಳು ಹುಣ್ಣಿಮೆ ಆಚರಣೆಗೆ ನಿರೀಕ್ಷೆಗೂ ಮೀರಿದ ಕಾಣಿಕೆಯನ್ನು ನೀಡಿದ್ದಾರೆ.