ಕಂದಾಯ ಸಚಿವರ ಹುಡುಕಿ, ಡಿಸಿ ಕಚೇರಿಗೆ ಕರೆ ತನ್ನಿ ಎಂದು ದೂರು!ಅತಿವೃಷ್ಟಿ ಬೆಳೆಹಾನಿ ಪರಿಶೀಲಿಸಲು ಜಗಳೂರಿಗೆ ಕಂದಾಯ ಸಚಿವ ಕೃಷ್ಣಭೈರೇಗೌಡ ಭೇಟಿ ನೀಡಿದ್ದಾರೆ. ಆದರೆ, ಡಿಸಿ ಕಚೇರಿಗೆ ಬಂದು ರೈತರ ಸಮಸ್ಯೆ ಆಲಿಸದೇ ಹೋಗಿದ್ದಾರೆ ಎಂದು ಖಂಡಿಸಿ ರಾಜ್ಯ ರೈತ ಸಂಘ ಮತ್ತು ಹಸಿರು ಸೇನೆಯ ರೈತರು, "ಸಚಿವ ಕೃಷ್ಣ ಭೈರೇಗೌಡ ಕಾಣೆಯಾಗಿದ್ದು, ಹುಡುಕಿ, ಜಿಲ್ಲಾಧಿಕಾರಿ ಕಚೇರಿಗೆ ಕರೆ ತನ್ನಿ " ಎಂಬುದಾಗಿ ವಿದ್ಯಾ ನಗರ ಠಾಣೆ ಪೊಲೀಸರಿಗೆ ದೂರು ನೀಡುವ ಮೂಲಕ ವಿನೂತನವಾಗಿ ಪ್ರತಿಭಟಿಸಿದ್ದಾರೆ.