ಪತ್ರಕರ್ತರ ಸಮ್ಮೇಳನ ನಿರೀಕ್ಷೆ ಮೀರಿ ಯಶಸ್ವಿ: ಶಿವಾನಂದ ತಗಡೂರುಸಮ್ಮೇಳನದ ಬಗ್ಗೆ ರಾಜ್ಯಾದ್ಯಂತ ಪತ್ರಕರ್ತರಿಂದ ಮೆಚ್ಚುಗೆ ವ್ಯಕ್ತವಾಗಿದೆ. ಸಮ್ಮೇಳನದ ಉದ್ಘಾಟನೆ, ಸಮಾರೋಪವಷ್ಟೇ ಅಲ್ಲದೇ, ಪತ್ರಿಕೋದ್ಯಮ, ಪತ್ರಕರ್ತರು ಎದುರಿಸುತ್ತಿರುವ ವಿವಿಧ ಸವಾಲು, ಸಮಸ್ಯೆಗಳು, ಪರಿಹಾರೋಪಾಯಗಳ ಬಗ್ಗೆ ನಾಲ್ಕು ಅರ್ಥಪೂರ್ಣ ಗೋಷ್ಠಿ ನಡೆದವು. ಎಲ್ಲೆಡೆ ಸಮ್ಮೇಳನದ ಬಗ್ಗೆ ಪ್ರಶಂಸೆ ಕೇಳಿ ಬರುತ್ತಿದೆ. ಇದಕ್ಕೆ ಇಲ್ಲಿನ ಜಿಲ್ಲಾ ಘಟಕ, ವರದಿಗಾರರ ಕೂಟ, ಉಪ ಸಮಿತಿಗಳು, ಎಲ್ಲಾ ಪದಾಧಿಕಾರಿಗಳು, ಸದಸ್ಯರ ಸಾಂಘಿಕ ಪ್ರಯತ್ನ, ಅತ್ಯುತ್ತಮ ಸಹಕಾರ ಕಾರಣ.