• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಹೊಳೆನರಸೀಪುರದ ತೇರಿಗೆ ಹಳೆಯ ಬಟ್ಟೆಗಳ ಅಲಂಕಾರ
ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ಬ್ರಹ್ಮ ರಥೋತ್ಸವ ಮಾರ್ಚ್ ೧೩ರ ಗುರುವಾರ ನಡೆಯಲಿದೆ. ಜಾತ್ರೋತ್ಸವಕ್ಕೆ ನವವಧುವಿನಂತೆ ಶೃಂಗಾರಗೊಂಡು ವೈಭವದಿಂದ ಕಂಗೊಳಿಸಬೇಕಿದ್ದ ಶ್ರೀ ಸ್ವಾಮಿಯ ಬ್ರಹ್ಮರಥಕ್ಕೆ ಹರಿದ ಹಾಗೂ ಮಾಸಿದ ಬಟ್ಟೆಗಳನ್ನು ತೊಡಿಸುವ ಮೂಲಕ ಶ್ರೀ ಸ್ವಾಮಿಯ ಭಕ್ತರಿಗೆ ಅವಮಾನ ಮಾಡಿರುವ ಜತೆಗೆ ರಥಕ್ಕೆ ಒಳ್ಳೆಯ ಬಟ್ಟೆ ಹಾಕಲೂ ಮುಜರಾಯಿ ಇಲಾಖೆಯಲ್ಲಿ ಹಣವಿಲ್ಲವೆಂದು ಫೆ.೧೭ರಂದು ಶಾಸಕ ಎಚ್.ಡಿ.ರೇವಣ್ಣ ಅವರು ಮಾಡಿರುವ ಆರೋಪಕ್ಕೆ ಕೈಗನ್ನಡಿಯಂತಿದೆ.
ಬೇಲೂರು ಚೆಸ್ಕಾಂನಿಂದ ಚೆನ್ನಕೇಶವ ಸ್ವಾಮಿಗೆ ಮಹಾಭಿಷೇಕ
ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ನಿಯಮಿತ ಅಧಿಕಾರಿಗಳು ಹಾಗೂ ನೌಕರರ ವರ್ಗದ ವತಿಯಿಂದ ಶ್ರೀ ಚೆನ್ನಕೇಶವ ಸ್ವಾಮಿಯವರಿಗೆ ಮಹಾಭಿಷೇಕವನ್ನು ಏರ್ಪಡಿಸಲಾಗಿತ್ತು. ಶ್ರೀ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ ಹಾಗೂ ಕೆಪಿಟಿಸಿಎಲ್‌ಟಿಎಲ್ ಹಾಗೂ ಎಸ್ ಎಸ್ ನೌಕರರು ಗ್ರಾಮ ವಿದ್ಯುತ್ ಪ್ರತಿನಿಧಿಗಳು ಬೇಲೂರು ಉಪ ವಿಭಾಗ ಇವರ ವತಿಯಿಂದ ಶ್ರೀ ಚೆನ್ನಕೇಶವ ಸ್ವಾಮಿಗೆ ವಿಶೇಷ ಪೂಜಾ ಮಹೋತ್ಸವವನ್ನು ಮಹಾಭಿಷೇಕವನ್ನು ನಡೆಸಲಾಗಿದೆ. ಸುಮಾರು 20 ವರ್ಷಗಳಿಂದ ನಾವು ವರ್ಷಕ್ಕೊಮ್ಮೆ ಚೆನ್ನಕೇಶಸ್ವಾಮಿಗೆ ಮಹಾಭಿಷೇಕ ಮಾಡುತ್ತಾ ಬರುತ್ತಿದ್ದು ಯಾವುದೇ ತೊಂದರೆಗಳು ಬಾರದಂತೆ ದೇವರಲ್ಲಿ ಪ್ರಾರ್ಥಿಸಿ, ಪೂಜೆ ಸಲ್ಲಿಸುತ್ತಾ ಬಂದಿದ್ದೇವೆ ಎಂದು ತಿಳಿಸಿದರು.
ಹಾಸನ ಜಿಲ್ಲೆಯ ವಿವಿಧೆಡೆ ವರ್ಷದ ಮೊದಲ ಮಳೆ
ಜಿಲ್ಲೆಯ ವಿವಿಧೆಡೆ ಈ ವರ್ಷದ ಮೊದಲ ಮಳೆ ಬುಧವಾರ ಧಾರಾಕಾರವಾಗಿ ಸುರಿದಿದೆ. ಹಾಸನ, ಆಲೂರು, ಸಕಲೇಶಪುರ ಮತ್ತು ಚನ್ನರಾಯಪಟ್ಟಣ ತಾಲೂಕುಗಳಲ್ಲಿ ಬುಧವಾರ ಸಂಜೆ ಮಳೆ ತನ್ನ ಆರ್ಭಟ ತೋರಿದೆ. ವಾಡಿಕೆಯಂತೆ ಮಾರ್ಚ್ ತಿಂಗಳಲ್ಲಿ ಮಳೆ ಬರುತ್ತದೆ. ಅಂತೆಯೇ ಮೊದಲ ಮಳೆ ಬಂದಿರುವುದು ರೈತರ ಮುಖದಲ್ಲಿ ನಗು ತಂದಿದೆ. ಸಾಕಷ್ಟು ಜನರು ಬೇಸಿಗೆ ಬೆಳೆ ಮಾಡಿಕೊಂಡು ಹಗಲು- ರಾತ್ರಿ ಎನ್ನದೆ ಪಂಪ್‌ಸೆಟ್‌ ಹಾಗೂ ಕೆರೆಕಟ್ಟೆಗಳಿಂದ ನೀರು ಹಾಯಿಸಲು ಹರಸಾಹಸಪಡುತ್ತಿದ್ದರು. ಈಗ ಅವರಿಗೆ ಅನುಕೂಲವಾಗಿದೆ.
ಮೈಕ್ರೋ ಫೈನಾನ್ಸ್‌ ಸಾಲಕ್ಕೆ ಹೆದರಿ ಮಹಿಳೆ ಆತ್ಮಹತ್ಯೆ
ಮೈಕ್ರೋ ಫೈನಾನ್ಸ್‌ಗಳಲ್ಲಿ ತೆಗೆದುಕೊಂಡಿದ್ದ ಸಾಲ ಕಟ್ಟಲಾಗದೆ ಬೇಸತ್ತ ಮಹಿಳೆಯೊಬ್ಬರು ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ತಾಲೂಕಿನ ಹಳ್ಳಿಯೂರು ಗ್ರಾಮದಲ್ಲಿ ಬುಧವಾರ ಮುಂಜಾನೆ ನಡೆದಿದೆ. ಮೈಕ್ರೋ ಫೈನಾನ್ಸ್ ಅವರ ಮನೆ ಬಾಗಿಲಿಗೆ ಬಂದು ಹಣ ಕಟ್ಟುವಂತೆ ಕಿರುಕುಳ ನೀಡುತ್ತಿದ್ದರು ಎಂದು ಗ್ರಾಮದ ಮಹಿಳೆಯರು ಆರೋಪ ಮಾಡುತ್ತಿದ್ದಾರೆ. ಎಲ್ಲಿ ನನ್ನ ಮರ್ಯಾದೆ ಊರಿನವರ ಮುಂದೆ ಹೋಗುತ್ತದೆಯೆಂದು ಹೆದರಿ ಮನೆಯಲ್ಲಿ ನೇಣು ಬಿಗಿದುಕೊಂಡಿದ್ದಾಳೆ ಎಂದು ಸುಂದ್ರಮ್ಮ ಆರೋಪ ಮಾಡಿದರು.
ಕಡುವಿನಕೋಟೆ ಗ್ರಾಮಸ್ಥರಿಂದ ಗರುಡೋತ್ಸವ
ಹೊಳೆನರಸೀಪುರ ಪಟ್ಟಣದ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಾಲಯದ ವೈಭವದ ಬ್ರಹ್ಮರಥೋತ್ಸವ ಪ್ರಯುಕ್ತ ಕಡುವಿನಕೋಟೆ ಗ್ರಾಮಸ್ಥರಿಂದ ಮಂಗಳವಾರ ರಾತ್ರಿ ೧೧ ಗಂಟೆಯಿಂದ ಶ್ರೀ ಗರುಡೋತ್ಸವ ಅದ್ಧೂರಿಯಾಗಿ ಜರುಗಿತು. ಸಂಪ್ರದಾಯದ ಆಚರಣೆಯಂತೆ ಪೂಜಾ ಕೈಂಕರ್ಯ ನೆರವೇರಿಸಿದ ನಂತರ ರಾಜಬೀದಿ ಉತ್ಸವ ಸಂಭ್ರಮ ಹಾಗೂ ವೈಭವದಿಂದ ಜರುಗಿತು. ನಂತರ ಪ್ರಾಕಾರೋತ್ಸವ ನೆರವೇರಿಸಿ, ಮಹಾಮಂಗಳಾರತಿ ಹಾಗೂ ಭಕ್ತರಿಗೆ ತೀಥ ಪ್ರಸಾದ ವಿನಿಯೋಗ ಮಾಡಲಾಯಿತು.
ಶಂಭುನಾಥ ಶ್ರೀ ಹುಟ್ಟುಹಬ್ಬ ಹಿನ್ನೆಲೆ ಗೋಶಾಲೆಗೆ ಮೇವು
ಶಂಭುನಾಥ ಸ್ವಾಮೀಜಿಯವರ 46ನೇ ಹುಟ್ಟುಹಬ್ಬದ ಅಂಗವಾಗಿ ನಗರದ ಆದಿಚುಂಚನಗಿರಿ ಸಮೂಹ ವಿದ್ಯಾಸಂಸ್ಥೆ ವತಿಯಿಂದ ಜಾಜೂರು ಸಮೀಪ ಇರುವ ಶ್ರೀ ಸಂಕಟ ಮೋಚನ ಪಾಶ್ವಭೈರವ ಗೋ ಶಾಲೆಗೆ ಒಂದು ವಾಹನ ಹಸಿ ಮೇವನ್ನು ಕಾಲೇಜಿನ ಪ್ರಾಂಶುಪಾಲ ಲಿಂಗರಾಜು ಮತ್ತು ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ನೀಡಿದರು. ಮುಖ್ಯ ಶಿಕ್ಷಕಿ ಜ್ಞಾನೇಶ್ವರಿ ಗೋ ಸೇವೆ ಬಹಳ ಮಹತ್ತರವಾದಂತಹ ಒಂದು ಸೇವೆ, ಇದರಲ್ಲಿ ನಾವು ಸಹ ಇಂದು ಪಾಲ್ಗೊಳ್ಳುವ ಅವಕಾಶವನ್ನ ಕಲ್ಪಿಸಿಕೊಂಡೆವು ಗೋಶಾಲೆ ಆಡಳಿತಾಧಿಕಾರಿ ಮೋಹನ್ ಕುಮಾರ್ ಸಹಕರಿಸಿದ್ದಾರೆ, ಧನ್ಯವಾದಗಳು ಎಂದರು.
ಯುವ ಜನಾಂಗಕ್ಕೆ ವಚನ ಸಾಹಿತ್ಯದ ಅನಿವಾರ್ಯತೆ ಇದೆ
ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್ ವತಿಯಿಂದ ಜಿಲ್ಲೆ ಮತ್ತು ತಾಲೂಕು ಘಟಕದಿಂದ ನಡೆಯುವ ಪ್ರತಿಯೊಂದು ಕಾರ್ಯಕ್ರಮಗಳು ಶಾಲಾ-ಕಾಲೇಜುಗಳಲ್ಲಿ ನಡೆಸುವ ವಾಡಿಕೆಯನ್ನು ಹೆಚ್ಚು ಬೆಳೆಸಿಕೊಳ್ಳಬೇಕಿದೆ. ಕಾರಣ ಯುವ ಜನಾಂಗಕ್ಕೆ ವಚನ ಸಾಹಿತ್ಯದ ಅನಿವಾರ್ಯತೆ ಇದೆ ಎಂದು ಅಖಿಲ ಭಾರತ ಶರಣ ಸಾಹಿತ್ಯ ಪರಿಷತ್‌ ರಾಜ್ಯಾಧ್ಯಕ್ಷ ಡಾ.ಸಿ. ಸೋಮಶೇಖರ್ ತಿಳಿಸಿದರು. ಹಾಸನ ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷರಾದ ಎಂ.ಎನ್. ಕುಮಾರಸ್ವಾಮಿರವರ ಅಧ್ಯಕ್ಷತೆಯನ್ನು ಜಿಲ್ಲೆಯಲ್ಲಿ ಉತ್ತಮ ಸಂಘಟನೆ ನಡೆದಿದ್ದು, ಮುಂದಿನ ದಿನದಲ್ಲಿ ದೊಡ್ಡ ಮಟ್ಟದ ಜಿಲ್ಲಾ ಸಮ್ಮೇಳನ ಸಲಹೆ ನೀಡಿದರು.
ಬಜೆಟ್‌ಗೆ ವಿರೋಧ ಪಕ್ಷದವರ ವಿರೋಧ ಸಾಮಾನ್ಯ
ಪ್ರತಿ ಬಾರಿ ಬಜೆಟ್‌ ಮಂಡನೆ ಆದಾಗಲೂ ಆಡಳಿ ಪಕ್ಷದವರನ್ನು ಹೊರತುಪಡಿಸಿ ವಿರೋಧ ಪಕ್ಷದವರು ಟೀಕೆ ಮಾಡುವುದು ಸಾಮಾನ್ಯ. ಅವರು ಹೇಳುವಂತೆ ಬಜೆಟ್‌ನಲ್ಲಿ ಹಾಸನ ಜಿಲ್ಲೆಗೆ ಅನ್ಯಾಯ ಆಗಿಲ್ಲ ಎನ್ನುವ ಮೂಲಕ ಬಜೆಟ್‌ ಖಂಡಿಸಿದ್ದ ಜೆಡಿಎಸ್‌ ಮುಖಂಡ ಎಚ್.ಡಿ. ರೇವಣ್ಣ ಹೇಳಿಕೆಗೆ ಸಂಸದ ಶ್ರೇಯಸ್‌ ಪಟೇಲ್‌ ತಿರುಗೇಟು ನೀಡಿದರು. ಆನೆಧಾಮ ನಿರ್ಮಾಣಕ್ಕೆ ಯೋಜನೆ ಘೋಷಣೆ ಮಾಡಲಾಗಿದೆ. ಹಾಸನ ವಿಮಾನ ನಿಲ್ದಾಣಕ್ಕೂ ಮುಂದಿನ ದಿನದಲ್ಲಿ ೫೦ ಕೋಟಿ ಅನುದಾನ ಸಿಗಲಿದೆ. ಸದ್ಯ ವಿಮಾನ ನಿಲ್ದಾಣದ ಕಾಮಗಾರಿಗೆ ಹಣದ ಕೊರತೆ ಇರುವುದಿಲ್ಲ. ನಮ್ಮ ಬಜೆಟ್‌ನಲ್ಲಿ ಶೇಕಡ ೯೦ರಷ್ಟು ಬೇಡಿಕೆ ಈಡೇರಿಕೆ ಮಾಡಲಾಗಿದೆ ಎಂದರು.
ಜೀತ ಪದ್ಧತಿ ನಿರ್ಮೂಲನೆ ಎಲ್ಲರ ಜವಾಬ್ದಾರಿ
ಜೀತ ಪದ್ಧತಿ ಎಂಬುದು ನಮ್ಮ ಸಮಾಜದಲ್ಲಿ ಪುರಾತನ ಕಾಲದಿಂದಲೂ ಬೇರುಬಿಟ್ಟಿರುವ ವ್ಯವಸ್ಥೆಯಾಗಿದೆ, ಇದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಜವಾಬ್ದಾರಿ ಎಲ್ಲರ ಮೇಲಿದೆ. ಈ ನಿಟ್ಟಿನಲ್ಲಿ ಪ್ರತಿಯೊಬ್ಬರು ಎಚ್ಚರವಹಿಸಿ ಕಾರ್ಯನಿರ್ವಹಿಸಬೇಕಾಗಿದೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳಾದ ಬಿ.ಕೆ ದಾಕ್ಷಾಯಿಣಿ ಅವರು ತಿಳಿಸಿದ್ದಾರೆ.
ಕೆರೆಗೆ ಹಾರಿ ತಾಯಿ ಮಗ ಆತ್ಮಹತ್ಯೆ
ಮದುವೆಯಾದ 8 ತಿಂಗಳಲ್ಲೇ ಅತ್ತೆ ಸೊಸೆ ಜಗಳದಿಂದ ಪತ್ನಿ ದೂರಾದ ಹಿನ್ನೆಲೆಯಲ್ಲಿ ಮನನೊಂದು ತಾಯಿ ಮಗ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಚನ್ನರಾಯಪಟ್ಟಣ ತಾಲೂಕಿನ ಕಬ್ಬಳಿ ಗ್ರಾಮದಲ್ಲಿ ನಡೆದಿದೆ. ಕಳೆದ ಎಂಟು ತಿಂಗಳ ಹಿಂದಷ್ಟೇ ಭರತ್‌ಗೆ ಅರಸೀಕೆರೆ ತಾಲೂಕಿನ ಬಾಗೂರನಹಳ್ಳಿ ಗ್ರಾಮದ ಗೀತಾ ಜೊತೆ ಮದುವೆಯಾಗಿತ್ತು. ಅತ್ತೆ-ಸೊಸೆ ನಡುವೆ ಹೊಂದಾಣಿಕೆ ಇಲ್ಲದೆ ಪದೇ ಪದೇ ಜಗಳ ನಡೆಯುತ್ತಿತ್ತು.
  • < previous
  • 1
  • ...
  • 141
  • 142
  • 143
  • 144
  • 145
  • 146
  • 147
  • 148
  • 149
  • ...
  • 509
  • next >
Top Stories
ಬಾಹ್ಯಾಕಾಶದಿಂದ ಫ್ರೀಜ್‌ ಮಾಡಿದ್ದ ಹೆಸರು, ಮೆಂತ್ಯೆ ವಾಪಸ್‌!
ಶುಲ್ಕ ಪಾವತಿಸದ ವಿದ್ಯಾರ್ಥಿನಿ ತಾಯಿ ತಾಳಿ ಬಿಚ್ಚಿಸಿಕೊಂಡಿದ್ದ ಚೇರ್‌ಮನ್‌ ಕ್ಷಮೆ
ರಮ್ಯಾ ಹಾಗೂ ವಿನಯ್‌ ಸುತ್ತಾಟದ ಫೋಟೋ ಟ್ರೆಂಡಿಂಗ್‌
ಯಶ್ ದೃಷ್ಟಿಕೋನ ಅಚ್ಚರಿಗೊಳಿಸಿತು : ರುಕ್ಮಿಣಿ ವಸಂತ್
ಬ್ಯಾಲೆಟ್ ಪೇಪರ್ ಅಕ್ರಮ ಈಗ ಸುಲಭವಲ್ಲ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved