• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಸಂಸದ ಶ್ರೇಯಸ್ ಎಂ.ಪಟೇಲ್ ಮನೆಗೆ ಲೋಕೋಪಯೋಗಿ ಸಚಿವ ಸತೀಶ್‌ ಜಾರಕಿಹೊಳಿ ಭೇಟಿ

ಪಟ್ಟಣದಲ್ಲಿರುವ ಸಂಸದ ಶ್ರೇಯಸ್ ಎಂ.ಪಟೇಲ್ ಅವರ ನಿವಾಸಕ್ಕೆ ಶುಕ್ರವಾರ ಸಂಜೆ ಲೋಕೋಪಯೋಗಿ ಸಚಿವರಾದ ಸತೀಶ್ ಜಾರಕಿಹೊಳಿ ಅವರು ಭೇಟಿ ನೀಡಿ, ಕೆಲ ಸಮಯವಿದ್ದು, ಆತಿಥ್ಯ ಸ್ವೀಕರಿಸಿ ತೆರಳಿದರು

ಕಾರಿನಲ್ಲೇ ಶವವಾದ ಗ್ರಾಪಂ ಸಹಾಯಕ ಲೆಕ್ಕಪರಿಶೋಧಕ
ಚನ್ನರಾಯಪಟ್ಟಣದ ರಾಮೇಶ್ವರ ಬಡಾವಣೆ ಬಳಿ ಅವರದೇ ಕಾರಿನಲ್ಲಿ ಶವವಾಗಿ ಪತ್ತೆಯಾಗಿದ್ದಾರೆ. ಶಿವಪ್ರಸಾದ್ (32) ತೀವ್ರ ಕುಡಿತದ ಚಟಕ್ಕೆ ಒಳಗಾಗಿದ್ದರು ಎನ್ನಲಾಗಿದೆ. ರಾಮೇಶ್ವರ ಬಡಾವಣೆಯ ಬಳಿ ಸಾಕಷ್ಟು ಸಮಯದಿಂದ ಕಾರು ನಿಂತಿದ್ದನ್ನು ಕಂಡ ಸಾರ್ವಜನಿಕರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ನಡೆಸಿದಾಗ ಕಾರಿನೊಳಗೆ ಕೀ ಇದ್ದು ಕಾರು ಲಾಕ್‌ ಆಗಿತ್ತು. ಮೆಕ್ಯಾನಿಕ್‌ ಕರೆಸಿ ಕಾರಿನ ಬಾಗಿಲು ತೆರೆದಾಗ ಅದರೊಳಗೆ ಶಿವಪ್ರಸಾದ್‌ ಮೃತಪಟ್ಟಿದ್ದರು.
ಇಂದಿನಿಂದ ಐದು ದಿನ ಕಣಕಟ್ಟೆ ಕರಿಯಮ್ಮದೇವಿ ಜಾತ್ರೆ
ಅಂಕುರಾರ್ಪಣೆಯೊಂದಿಗೆ ಮೂಲ ಶ್ರೀ ಕರಿಯಮ್ಮ ದೇವಸ್ಥಾನದಲ್ಲಿ ರುದ್ರಾಭಿಷೇಕ, ಮಹಾಪೊಜೆ ನಂತರ ಶ್ರೀ ಕರಿಯಮ್ಮ ನವರು ಮಧುವಣಗಿತ್ತಿಯಾಗಲು ಪಕ್ಕದ ತಾಲೂಕು ಕಡೂರಿನ ಬಿಟ್ಟೇನಹಳ್ಳಿ ಗ್ರಾಮಕ್ಕೆ ತೆರಳಿ ಬೆಳಿಗ್ಗೆ ಉತ್ಸವದೊಂದಿಗೆ ಪುರ ಪ್ರವೇಶ, ಶ್ರೀ ಸುಕ್ಷೇತ್ರ ಕೆರೆಗೊಡಿ ಶ್ರೀ ಗುರುಪರದೇಶಿಕೇಂದ್ರ ಸ್ವಾಮೀಜಿರವರ ಪಾದಪೂಜೆ ಅದ್ಧೂರಿ ಸ್ವಾಗತ, ಬೇವಿನ ಸೀರೆ, ಬಾಯಿಬೀಗ, ಹರಕೆ ಸೇವೆ, ಚೋಮನ ಕುಣಿತ,ಊರಿನ ಮೂರು ಕಣ್ಣು ಮಾರಮ್ಮ ದೇವಸ್ಥಾನದಿಂದ ಶ್ರೀ ಕರಿಯಮ್ಮ ದೇವಿ ದೇವಾಲಯದವರೆಗೆ ಉತ್ಸವದ ನಂತರ ರಾತ್ರಿ ಶ್ರೀ ವೀರಭದ್ರೇಶ್ವರ ಸ್ವಾಮಿಯವರ ಉಯ್ಯಾಲೆ ಉತ್ಸವ ಜರುಗಲಿದೆ.
ನೊರನಕ್ಕಿ ಗೇಟ್ ಗ್ರಾಪಂ ಅಧ್ಯಕ್ಷರಾಗಿ ವಸಂತರಾಣಿ ಅವಿರೋಧ ಆಯ್ಕೆ
ವಸಂತ ರಾಣಿ ದಿನೇಶ್ ಅವರ ಬೆಂಬಲಿಗರು ಡಿಜೆ ಸೌಂಡ್‌ಗೆ ನೃತ್ಯ ಮಾಡುವ ಮೂಲಕ ಸಂಭ್ರಮಾಚರಣೆ ಮಾಡಿದರು. ಇದೇ ಸಂದರ್ಭದಲ್ಲಿ ನೂತನ ಅಧ್ಯಕ್ಷರಾದ ವಸಂತರಾಣಿ ದಿನೇಶ್ ಮಾತನಾಡಿ, ನನ್ನ ನೊರನಕ್ಕಿ ಗ್ರಾಮ ಪಂಚಾಯಿತಿ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲು ಸಹಕಾರ ನೀಡಿದ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರು, ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ, ಮಾಜಿ ಮಂತ್ರಿ ಎಚ್ ಡಿ ರೇವಣ್ಣ, ಶಾಸಕರಾದ ಸೂರಜ್ ರೇವಣ್ಣರವರಿಗೆ ತುಂಬು ಹೃದಯದ ಧನ್ಯವಾದಗಳನ್ನು ತಿಳಿಸಿದರು. ನಿಕಟ ಪೂರ್ವ ಅಧ್ಯಕ್ಷರ ರಾಜೀನಾಮೆಯಿಂದ ತೆರವಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಈ ದಿನ ಚುನಾವಣೆ ನಡೆಯಿತು.
ನೆಲದ ಮೇಲೆ ಕುಳಿತು ಊಟ ಮಾಡುವುದು ಒಳ್ಳೆಯದು
ಮಣ್ಣಿನ ಮಡಿಕೆಗಳನ್ನು ಬಳಸಿ, ಸೌದೆ ಒಲೆಯಲ್ಲಿ ಮಾಡಿದ ಅಡುಗೆ ಅತ್ಯಂತ ಬಲು ರುಚಿಕರವಾಗಿರುತ್ತದೆ. ಆರೋಗ್ಯಕ್ಕೆ ಉತ್ತಮವಾಗಿರುತ್ತದೆ. ಮನೆಯ ಸದಸ್ಯರೆಲ್ಲರೂ ಒಟ್ಟಿಗೆ ನೆಲದ ಮೇಲೆ ಕುಳಿತು ಅನ್ನ ಪೂರ್ಣೇಶ್ವರಿಯನ್ನು ಸ್ಮರಿಸಿ ಊಟ ಮಾಡುತ್ತಿದ್ದರು. ನಮ್ಮ ಪೂರ್ವಜರು ನಡೆಸಿಕೊಂಡ ಬಂದ ರೀತಿ ಉತ್ತಮವಾದುದು. ನೆಲದ ಮೇಲೆ ಕುಳಿತು ಒಟ್ಟಿಗೆ ಊಟ ಮಾಡುವುದರಿಂದ ಅನೇಕ ಆರೋಗ್ಯಕರ ಅನುಕೂಲತೆಗಳು ಇವೆ ಎಂದರು. ಗ್ರಾಮೀಣ ಸೊಗಡಿನ ಅಕ್ಕಿ ಶಾವಿಗೆ ರಾಗಿ ಶಾವಿಗೆ ಚಿಲ್ಕ್ ಅವರೇ ಸಾರು ಮತ್ತು ಬೆಲ್ಲ ತೆಂಗಿನ ಕಾಯಿ ಹಾಲು ಇವುಗಳನ್ನು ನಮ್ಮ ರಂಗಲೋಕದ ಸದಸ್ಯರು, ಮಾತೆಯರು, ಮಕ್ಕಳು ಎಲ್ಲರೂ ಸೇರಿ ಬಹಳ ಶ್ರಮದಾಯಕವಾಗಿ ಸೌದೆ ಒಲೆಯಲ್ಲಿಯೇ ಅಡುಗೆ ಮಾಡಿ ನಮಗೆಲ್ಲರಿಗೂ ಉಣ ಬಡಿಸಲು ತಯಾರು ಮಾಡಿದ್ದಾರೆ, ಅವರೆಲ್ಲರಿಗೂ ಅಭಿನಂದನೆಗಳು ಎಂದರು.
ಮೇಲ್ಸೇತುವೆ ಮುಂದಿನ ಮಾರ್ಚ್‌ಗೆ ಪೂರ್ಣ
ಎಲ್ಲವೂ ಅಂದುಕೊಂಡಂತೆ ನಡೆದರೆ ಮುಂದಿನ ವರ್ಷದ ಮಾರ್ಚ್ ವೇಳೆಗೆ ಮೇಲ್ಸೇತುವೆ ಸಂಚಾರಕ್ಕೆ ಮುಕ್ತವಾಗಲಿದೆ ಎಂದರು. ಈ ಯೋಜನೆಯ ಒಟ್ಟು ಅಂದಾಜು ವೆಚ್ಚ ೮೩.೭೨ ಕೋಟಿ. ಇದರಲ್ಲಿ ರಾಜ್ಯದ ಪಾಲು ೪೯.೫೪ ಕೋಟಿ ನೀಡಬೇಕಿದೆ. ಈಗ ೨೧.೮೧ ಕೋಟಿ ರು. ನೀಡುವುದಾಗಿ ಸರ್ಕಾರ ಹೇಳಿದ್ದು, ಎಚ್‌ಎಂಆರ್‌ಡಿಸಿ ಅಡಿ ೧೫ ಕೋಟಿ ನೀಡಲಾಗಿದೆ. ಅನುದಾನಕ್ಕೆ ಯಾವುದೇ ರೀತಿಯ ಸಮಸ್ಯೆ ಇಲ್ಲ ಎಂದು ಸ್ಪಷ್ಟಪಡಿಸಿದರು. ಮೇಲ್ಸೇತುವೆ ಮೇಲಿನ ಕಬ್ಬಿಣದ ಬೃಹತ್ ಕಮಾನು ನಿರ್ಮಾಣ ಹೈದ್ರಾಬಾದ್‌ನಲ್ಲಿ ಆಗಲಿದೆ, ಅದಕ್ಕಾಗಿ ೮ ತಿಂಗಳು ಸಮಯಾವಕಾಶ ಬೇಕಿದೆ. ಅಲ್ಲಿವರೆಗೂ ಸಿವಿಲ್ ವರ್ಕ್ ಸೇರಿ ಉಳಿದ ಕಾಮಗಾರಿ ನಡೆಯಲಿವೆ ಎಂದರು.
ನ್ಯಾಯಕ್ಕೆ ಒತ್ತು ಕೊಡುವುದು ನಮ್ಮ ಉದ್ದೇಶ
ಯಾವುದೇ ಸಮಾಜಕ್ಕೂ ಅನ್ಯಾಯ ಮಾಡಲ್ಲ, ಯಾವುದೇ ಸಮುದಾಯವನ್ನು ಹೊಡೆದಾಡಿಸುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಬಿಜೆಪಿಯವರು ರಾಜ್ಯ ಸರ್ಕಾರ ಬೀಳಿಸಲು ಹುನ್ನಾರ ಮಾಡಿದ್ದಾರೆ. ನೀವು ಹುಷಾರಾಗಿರಿ ಎಂಬ ಎಐಸಿಸಿ ಅಧ್ಯಕ್ಷರ ಹೇಳಿಕೆ ಕುರಿತು ಕೇಳಿದ ಪ್ರಶ್ನೆಗೆ, ವಿಪಕ್ಷಗಳು ಆ ಕೆಲಸವನ್ನು ನಿರಂತರವಾಗಿ ಮಾಡುತ್ತಿವೆ. ಅವರ ಕೆಲಸವೇ ಅದು, ನಾವು ಜನ ಸೇವೆ ಮಾಡಲು ಅಧಿಕಾರ ಬಯಸುತ್ತೇವೆ, ಆದರೆ ಅವರು ದುರಾಸೆ, ಆದರೂ ನಾವು ಎಚ್ಚರಿಕೆಯಿಂದ ಇದ್ದೇವೆ ಎಂದರು. ನಮ್ಮ ಪಕ್ಷದಲ್ಲಿ ಎಲ್ಲರೂ ಒಗ್ಗಟ್ಟಾಗಿದ್ದೇವೆ. ಯಾವುದೇ ರೀತಿಯಲ್ಲೂ ಒಡಕಿಲ್ಲ ಎಂದರು.
ಪುರಸಭೆ ಮಳಿಗೆಗಳ ಹಳೆಯ ಬಾಡಿಗೆದಾರರ ತೆರವಿಗೆ ಕ್ರಮ
ಕೆಲವು ಮಳಿಗೆಗಳ ಸಿಂಗಲ್ ಟೆಂಡರ್ ನಡೆದಿದ್ದು ಇವುಗಳ ಮರು ಹರಾಜು ನಡೆಸಬೇಕು ಎಂದು ಸದಸ್ಯೆ ರೇಖಾ ಒತ್ತಾಯಿಸಿದರು. ಇದಕ್ಕೆ ಕೆಲವು ಸದಸ್ಯರು ಧ್ವನಿಗೊಡಿಸಿದರು. ೬ ಮಳಿಗೆಗಳು ಸಿಂಗಲ್ ಟೆಂಡರ್ ನಡೆದಿದ್ದು ಇವುಗಳ ಮರು ಹರಾಜು ನಡೆಸಲು ಜಿಲ್ಲಾಧಿಕಾರಿಗಳ ಅನುಮತಿಗಾಗಿ ಕಳುಹಿಸಿಕೊಡಲಾಗುವುದು ಎಂದು ಅಧ್ಯಕ್ಷರು ಹೇಳಿದರು. ಸದ್ಯ ೩೪ ವರ್ತಕರು ಎಲ್ಲ ಮಳಿಗೆಗಳನ್ನು ಏಕಕಾಲಕ್ಕೆ ಹರಾಜು ನಡೆಸುವಂತೆ ನ್ಯಾಯಾಲಯದ ಮೊರೆಹೋಗಿದ್ದು ನ್ಯಾಯಾಲಯ ಮುಂದಿನ ಮೂರು ತಿಂಗಳ ಒಳಗಾಗಿ ಉಳಿದಿರುವ ಮಳಿಗೆಗಳ ಟೆಂಡರ್ ನಡೆಸುವಂತೆ ಸೂಚಿಸಿದೆ ಎಂದರು.
ಖರ್ಗೆ ಹೇಳಿರುವುದು ಸತ್ಯ ನಾವು ಹುಷಾರಾಗಿರಬೇಕು : ಸಚಿವ ಸತೀಶ್ ಜಾರಕಿಹೊಳಿ

ರಾಜ್ಯದಲ್ಲಿ ಜಾತಿಗಣತಿ ತಕ್ಷಣ ಮಾಡೋ ಅಂತ ವಿಚಾರ ಅಲ್ಲ, ಸಮಯ ತೆಗೆದುಕೊಳ್ಳುತ್ತೆ, ಸೂಕ್ಷ್ಮ ವಿಚಾರ ಈ ವಿಚಾರದಲ್ಲಿ ಇನ್ನೂ ಸರಿಯಾದ ನಿರ್ಧಾರ ಆಗಿಲ್ಲ ಎಂದು ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ತಿಳಿಸಿದ್ದಾರೆ.

ಬಾಣಾವರ ಆಂಜನೇಯ ಸ್ವಾಮಿ ಬ್ರಹ್ಮ ರಥೋತ್ಸವ ಸಂಪನ್ನ
ರಥೋತ್ಸವದ ನಿಮಿತ್ತ ಶ್ರೀ ಆಂಜನೇಯ ಸ್ವಾಮಿಯವರಿಗೆ ಅಭಿಷೇಕ ಗಂಗಾಸ್ಥಾನವನ್ನು ಮಾಡಿಸಲಾಯಿತು. ನಂತರ ಮಯೂರ ವಾಹನೋತ್ಸವ, ಶೇಷ ವಾಹನೋತ್ಸವವನ್ನು ನೆರವೇರಿಸಿ ಗುರುವಾರದಂದು ಗಣಪತಿ ಹೋಮ, ಆಂಜನೇಯ ಹೋಮ, ರಾಮಕಾರಕ ಹೋಮ, ಬ್ರಹ್ಮಹೋಮ, ರುದ್ರ ಹೋಮ, ಆಂಜನೇಯ ಸ್ವಾಮಿಯವರ ರಥಾಂಗ ಹೋಮ, ರಥ ಪ್ರತಿಷ್ಠಾಪನೆ ಮತ್ತು ಕಳಸಾಭಿಷೇಕವನ್ನು ನಡೆಸಿ ಗಜೇಂದ್ರ ಮೋಕ್ಷ ಗರುಡೋತ್ಸವವನ್ನುನಡೆಸಿ ರಾತ್ರಿ 9 ಗಂಟೆಗೆ ಕಲ್ಯಾಣೋತ್ಸವವನ್ನು ನೆರವೇರಿಸಲಾಯಿತು.
  • < previous
  • 1
  • ...
  • 153
  • 154
  • 155
  • 156
  • 157
  • 158
  • 159
  • 160
  • 161
  • ...
  • 551
  • next >
Top Stories
ಕಾಂತಾರ 1 ವಾಟರ್ ಕ್ಯಾನ್ ರಹಸ್ಯ ಬಿಚ್ಚಿಟ್ಟ ಅರವಿಂದ ಕಶ್ಯಪ್
ದರ್ಶನ್ ಚಿತ್ರ ದಿ ಡೆವಿಲ್‌ನಲ್ಲಿ ಬಿಗ್‌ಬಾಸ್‌ ಗಿಲ್ಲಿ ನಟ
ಅವಕಾಶದ ಹೆಸರಲ್ಲಿ ಪಲ್ಲಂಗಕ್ಕೆ ಕರೆಯುತ್ತಾರೆ : ಸಂಯುಕ್ತಾ ಹೆಗಡೆ
ಸಿದ್ದು ಎಷ್ಟು ಸಿಎಂ ಆಗಿರ್ತಾರೋ ಅಷ್ಟೂ ದಿನ ಅವ್ರೇ ಸಿಎಂ : ಡಿಕೆಸು
ಪ್ರತಿ ಕೆ.ಜಿ. ತುಪ್ಪ 90 ರು, ಬೆಣ್ಣೆ ದರ 28 ರು. ಹೆಚ್ಚಿಸಿದ ನಂದಿನಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved