ಬೇಲೂರು ಪುರಸಭೆ ಅಧ್ಯಕ್ಷರ ವಿರುದ್ಧ ಅವಿಶ್ವಾಸ ನಿರ್ಣಯಕ್ಕೆ ಸಭೆಗೆ ಮನವಿಸದಸ್ಯರನ್ನು ಒಗ್ಗೂಡಿಸಿಕೊಂಡು ಹೋಗದ ಹಿನ್ನೆಲೆ ಹಾಗೂ ಸಣ್ಣಪುಟ್ಟ ವೈಮನಸ್ಸಿನಿಂದಾಗಿ ಪಕ್ಷಕ್ಕೆ ಮುಜುಗರ ತಂದಿದ್ದು, ಕಮಲ ಪಕ್ಷದ ವರಿಷ್ಠರ ತೀರ್ಮಾನದಂತೆ ಎಲ್ಲಾ ಸದಸ್ಯರ ಒಮ್ಮತ ಸಂಗ್ರಹಿಸಲು ಅವಿಶ್ವಾಸ ನಿರ್ಣಯವನ್ನು ಮಂಡಿಸಲು ಕೂಡಲೇ ಸಭೆ ಕರೆಯುವಂತೆ ಪುರಸಭೆ ಅಧ್ಯಕ್ಷರಿಗೆ ಹಾಗೂ ಮುಖ್ಯಾಧಿಕಾರಿ ಸುಜಯ್ ಅವರಿಗೆ ಪುರಸಭೆ ಮಾಜಿ ಅಧ್ಯಕ್ಷರು ಹಾಗೂ ಸದಸ್ಯರಾದ ಬಿ ಶಾಂತಕುಮಾರ್, ಬಿ ಗಿರೀಶ್, ಸಿ ಎನ್ ದಾನಿ ಹಾಗೂ ಅಕ್ರಂ ಪಾಷ ಮನವಿ ಪತ್ರ ಸಲ್ಲಿಸಿದ್ದಾರೆ.