• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಮನೆ ಮನೆ ಭೇಟಿ ನೀಡಿ ಖಾಸಗಿ ಶಾಲೆಯತ್ತ ಒಲವು ತೋರಿದ್ದ ಪೋಷಕರ ಮನವೊಲಿಸಿ ಮಕ್ಕಳ ದಾಖಲಾತಿ ಹೆಚ್ಚಿಸಿದ ಮುಖ್ಯಶಿಕ್ಷಕ

ಮುಖ್ಯಶಿಕ್ಷಕ ಎಚ್‌ ರಾಜನಾಯ್ಕರವರು ಸಹಶಿಕ್ಷಕರು ಹಾಗೂ ಗ್ರಾಮಸ್ಥರುಗಳ ತಂಡದೊಂದಿಗೆ ಮೇ ತಿಂಗಳಿನಿಂದಲೇ ಪೋಷಕರ ಮನೆ ಮನೆ ಭೇಟಿ ನೀಡಿ ಖಾಸಗಿ ಶಾಲೆಯತ್ತ ಒಲವು ತೋರಿದ್ದ ಪೋಷಕರನ್ನು ಮನವೊಲಿಸಿ ಮಕ್ಕಳ ದಾಖಲಾತಿಯನ್ನು ಹೆಚ್ಚಿಸಿದರು.

ರಸ್ತೆ ಅಭಿವೃದ್ಧಿಗೆ ಮುಂದಾದ ನಗರಸಭೆ ಅಧ್ಯಕ್ಷ ಸಮೀವುಲ್ಲಾ
ಶ್ರೀನಿವಾಸನಗರ ಸೇರಿದಂತೆ ಚೌಡೇಶ್ವರಿ ನಗರ, ಇಂದಿರಾನಗರ, ಹೊಯ್ಸಳ ನಗರ ಹೀಗೆ ಈ ಭಾಗದಲ್ಲಿ ಬರುವ ಹತ್ತಾರು ಬಡಾವಣೆಗಳ ಜನತೆಗೆ ಗರುಡಗಿರಿ ರಸ್ತೆಯಿಂದ ಟಿ ಎಚ್ ರಸ್ತೆಗೆ ನೇರವಾಗಿ ಸಂಚಾರ ಮಾಡಲು ನಗರಸಭೆ ರಸ್ತೆ ನಿರ್ಮಿಸಿ ಕೊಟ್ಟರೆ ಈ ಭಾಗದ ಜನತೆಗೆ ಅನುಕೂಲವಾಗುವುದಲ್ಲದೆ ಈ ಬಡಾವಣೆಗಳ ಅಭಿವೃದ್ಧಿಗೂ ಸಹಕಾರಿಯಾಗಲಿದೆ ಎಂದು ಮನವಿ ಮಾಡಿದ ಹಿನ್ನೆಲೆ ಗರುಡನಗಿರಿ ರಸ್ತೆಯಿಂದ ಶ್ರೀನಿವಾಸ ನಗರ ಬಡಾವಣೆ ಮಾರ್ಗವಾಗಿ ರಾಷ್ಟ್ರೀಯ ಹೆದ್ದಾರಿ 206 ಟಿ ಎಚ್ ರಸ್ತೆಗೆ ಸಂಪರ್ಕಿಸುವ ನೇರ ರಸ್ತೆ ಅಭಿವೃದ್ಧಿಗೆ ನಗರಸಭೆ ಅಗತ್ಯ ಕ್ರಮ ಕೈಗೊಳ್ಳುತ್ತಿದೆ ಎಂದು ಅಧ್ಯಕ್ಷ ಎಂ ಸಮಿವುಲ್ಲಾ ಹೇಳಿದರು.
ಅಪ್ರಾಪ್ತರಿಂದಾಗುವ ಅಪಘಾತಗಳಿಗೆ ಆರ್‌ಸಿ ಮಾಲೀಕರಿಗೆ ದಂಡ
ಬಿಜಿಎಸ್ ವಿಜ್ಞಾನ ಮತ್ತು ವಾಣಿಜ್ಯ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಕಾನೂನು ಅರಿವು ಕುರಿತು ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವಯಸ್ಸಿನ ಹದಿಹರೆಯದಲ್ಲಿ ಮನಸೋ ಇಚ್ಛೆಯಂತೆ ಬೈಕ್ ಓಡಿಸುವುದು ಕಾನೂನು ಬಾಹಿರವಾಗಿದ್ದು, ಅನಾಹುತಗಳು ಸಂಭವಿಸಿದರೆ ಕಾನೂನಿನ ಅನ್ವಯ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು. ಆದ್ದರಿಂದ ವಿದ್ಯಾರ್ಥಿಗಳು ಮೋಟಾರ್‌ ಬೈಕ್‌ಗಳನ್ನು 18 ವರ್ಷದ ನಂತರ ದಾಖಲಾತಿಯೊಂದಿಗೆ ಉಪಯೋಗಿಸುವುದು ಸೂಕ್ತ ಎಂದು ಆರಕ್ಷಕ ಉಪನಿರೀಕ್ಷಕರಾದ ಕಾವ್ಯ ಅರಿವು ಮೂಡಿಸಿದರು. ಹದಿಹರೆಯದ ವಯಸ್ಸಿನಲ್ಲಿ ಮನಸೋ ಇಚ್ಛೆಯಂತೆ ಮೋಟಾರ್‌ ಬೈಕ್‌ಗಳನ್ನು ಓಡಿಸುವುದು ಮತ್ತು ಉಪಯೋಗಿಸುವುದು ಕಾನೂನು ಬಾಹಿರ. ಇದರಿಂದ ಅನಾಹುತಗಳು ಸಂಭವಿಸಿದರೆ ದಾಖಲಾತಿ ಹೊಂದಿರುವ ವಾರಸುದಾರರಿಗೆ ಕಾನೂನಿನ ಅನ್ವಯ ದಂಡ ಮತ್ತು ಶಿಕ್ಷೆ ವಿಧಿಸಲಾಗುವುದು ಎಂದರು.
ಅರಸೀಕೆರೆ : ಹದಿನೈದು ಸಾವಿರ ದಾಟಿದ ಕೊಬ್ಬರಿ ಧಾರಣೆ - ರೈತರ ಮುಖದಲ್ಲಿ ಮೂಡಿದ ಮಂದಹಾಸ

ದಿನನಿತ್ಯ ಬಳಕೆಯ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ ಏರುತ್ತಿದ್ದರೂ ಕಳೆದ ಎರಡು ದಶಕಗಳಿಂದ ತೆಂಗಿನ ಉತ್ಪನ್ನಗಳು ಹಾಗೂ ಕೊಬ್ಬರಿದಾರಣೆ ಕುಸಿಯುತ್ತಿದ್ದುದು ಬೆಳೆಗಾರರಲ್ಲಿ ತೀವ್ರ ಆತಂಕವನ್ನು ಸೃಷ್ಟಿಸಿತ್ತು.

ಪಾಂಚಜನ್ಯ ಗಣಪತಿ ಅದ್ಧೂರಿ ವಿಸರ್ಜನಾ ಮೆರವಣಿಗೆ
ನಗರದ ಹಾಸನಾಂಬ ಕಲಾಕ್ಷೇತ್ರದ ಆವರಣದಲ್ಲಿ ಸೆಪ್ಟಂಬರ್ ೭ರಂದು ಮಣ್ಣಿನ ಗಣಪತಿ ಪ್ರತಿಷ್ಠಾಪನೆ ಮಾಡಿ ೬ ದಿನಗಳ ಕಾಲ ವಿವಿಧ ಪೂಜಾ ಕೈಂಕರ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿತು. ಕೊನೆಯ ದಿನ ಗುರುವಾರ ಮಧ್ಯಾಹ್ನ ಬೃಹತ್ ಶೋಭಾಯಾತ್ರೆಯು ಪ್ರಾರಂಭವಾಯಿತು. ಶ್ರೀಕೃಷ್ಣನ ಬೃಹತ್ ಪ್ರತಿಮೆ, ಶ್ರೀರಾಮನ ವಿಗ್ರಹ, ಶ್ರೀ ಮಾರುತಿ ವೇಶದಾರಿಗಳು, ಗೋವುಗಳು, ಬ್ಯಾಂಡ್ ಸೆಟ್, ವಾದ್ಯಗೋಷ್ಠಿ, ಕೇಸರಿ ಬಾವುಟದ ಪ್ರದರ್ಶನ ಆಕರ್ಷಣೆ ಒಂದು ಕಡೆಯಾದರೆ ಮತ್ತೊಂದು ಕಡೆ ಹೆಚ್ಚು ಶಬ್ಧ ಭರಿಸುವ ಡಿಜೆ ಸ್ಪೀಕರ್‌ಗಳಲ್ಲಿ ಹಾಡುಗಳು ಕೇಳಿಬಂದಿತು. ಇದಕ್ಕೆ ಪುರುಷರು ಮತ್ತು ಮಹಿಳೆಯರು ಹೆಜ್ಜೆ ಹಾಕಿ ಗಮನ ಸೆಳೆದರು.
ರಾಹುಲ್‌ ಗಾಂಧಿ ಹೇಳಿಕೆ ಖಂಡಿಸಿ ಆಲೂರಿನಲ್ಲಿ ಬಿಜೆಪಿ ಪ್ರತಿಭಟನೆ
ದೇಶದಲ್ಲಿ ರಾಹುಲ್ ಗಾಂಧಿ ಅಪ್ರಬುದ್ಧ ಹೇಳಿಕೆ ನೀಡುವ ಮೂಲಕ ಭಾರತದ ಮಾನ ಹರಾಜು ಹಾಕುತ್ತಿದ್ದಾರೆ. ಕೈಯಲ್ಲಿ ಸಂವಿಧಾನ ಪುಸ್ತಕ ಹಿಡೀತಾರೆ ಆದರೆ ಮನಸ್ಸಿನಲ್ಲಿ ಸಂವಿಧಾನ, ಮೀಸಲಾತಿ ವಿರೋಧಿ ನಿಲುವು ಇಟ್ಟುಕೊಂಡಿದ್ದಾರೆ. ವಿದೇಶದಲ್ಲಿ ನೀಡಿದ ಹೇಳಿಕೆಯೇ ಇದಕ್ಕೆ ಸಾಕ್ಷಿ. ಈ ಹೇಳಿಕೆಯನ್ನು ಆಲೂರು ಕಟ್ಟಾಯ ಮಂಡಲದ ಬಿಜೆಪಿ ಕಾರ್ಯಕರ್ತರು ತೀವ್ರವಾಗಿ ಖಂಡಿಸುತ್ತೇವೆ. ದೇಶವನ್ನು ವಿಭಜಿಸುವ ಶಕ್ತಿಗಳ ಜೊತೆ ನಿಂತು ದೇಶ ವಿರೋಧಿ ಹೇಳಿಕೆಗಳನ್ನು ನೀಡುವುದು ರಾಹುಲ್ ಗಾಂಧಿ ಮತ್ತು ಕಾಂಗ್ರೆಸ್‌ಗೆ ಅಭ್ಯಾಸವಾಗಿಬಿಟ್ಟಿದೆ ಎಂದು ಆಕ್ರೋಶ ಹೊರಹಾಕಿ ಆಲೂರಿನಲ್ಲಿ ಬಿಜೆಪಿ ಪ್ರತಿಭಟನೆ ನಡೆಸಿತು.
ಕಾಡಾನೆಗಳ ಅಲೆದಾಟದಿಂದ ಅರೆ ಮಲೆನಾಡಿಗರಿಗೆ ಸಂಕಟ
ಕಾಡಾನೆ ಹಿಂಡು ಜಮೀನಲ್ಲಿ ಅಡ್ಡಾದಿಡ್ಡಿ ಓಡಾಡುವುದರ ಮೂಲಕ ಬೆಳೆನಾಶ ಮಾಡಿ ರೈತರನ್ನು ಸಂಕಷ್ಟಕ್ಕೆ ದೂಡುತ್ತಿವೆ. ಅರೆಮಲೆನಾಡಿನ ಬಿಕ್ಕೋಡು ಗ್ರಾಮದ ತಾವರೆಕೆರೆಯಲ್ಲಿ ಸುಮಾರು 20ಕ್ಕೂ ಹೆಚ್ಚು ಕಾಡಾನೆ ಹಿಂಡು, 3 ಮರಿಗಳ ಸಮೇತ ಕೆರೆಯಲ್ಲಿ ಚಿನ್ನಾಟವಾಡಿ ಮೋಜು ಅನುಭವಿಸಿದೆ. ಬಿಕ್ಕೋಡು ಗ್ರಾಮದ ಸುತ್ತಮುತ್ತ ಕಾಡಾನೆಗಳ ಹಿಂಡು ಈ ಭಾಗದಲ್ಲಿ ಸಂಚರಿಸುತಿದ್ದು ಜೋಳ, ಬಾಳೆ, ಭತ್ತ, ಶುಂಠಿ, ಕಾಫಿ, ಅಡಿಕೆ ಬೆಳೆಗಳನ್ನು ನಾಶ ಮಾಡುತ್ತಿವೆ. ರಾತ್ರಿ ವೇಳೆ ನಿಡುಮನಹಳ್ಳಿ, ಜಗಬೋರನಹಳ್ಳಿ ಸುತ್ತಮುತ್ತಲಿನ ಗ್ರಾಮದ ರೈತರ ಬೆಳೆಗಳನ್ನು ತಿಂದು ನಾಶಪಡಿಸಿ ನಂತರ ಪಕ್ಕದಲ್ಲಿರುವ ತಾವರೆಕೆರೆಯಲ್ಲಿ ವಿಹಾರ ಮಾಡುತ್ತವೆ.
ಆಲೂರಿನಲ್ಲಿ ಕೋಳಿ ಅಂಗಡಿಗಳಿಗೆ ನೀರಿನ ಸಂಪರ್ಕ ಕಟ್‌
ಕೋಳಿ ಅಂಗಡಿಗಳಿರುವ ನಿವೇಶನ ಕುರಿತ ವಿವಾದ ನ್ಯಾಯಾಲಯದಲ್ಲಿರುವುದರಿಂದ, ಮಾಲಿಕರು ಆಲೂರು ಪಟ್ಟಣ ಪಂಚಾಯಿತಿಗೆ ಯಾವುದೆ ಕಂದಾಯ ಪಾವತಿ ಮಾಡುತ್ತಿಲ್ಲ. ಇದರಿಂದ ಪಂಚಾಯಿತಿಗೆ ಲಕ್ಷಾಂತರ ರುಪಾಯಿ ನಷ್ಟವಾಗುತ್ತಿದೆ. ತಕ್ಷಣ ನೀರು ಸರಬರಾಜು ನಿಲ್ಲಿಸಬೇಕು, ವಿದ್ಯುತ್ ಸರಬರಾಜು ನಿಲ್ಲಿಸಲು ಸಂಬಂಧಪಟ್ಟ ಇಲಾಖೆಗಳಿಗೆ ಪತ್ರ ಬರೆಯುವಂತೆ ಆಗ್ರಹಿಸಿದರು. ಸಭೆ ಮುಗಿದ ನಂತರ ಕೋಳಿ ಅಂಗಡಿಗಳಿಗೆ ನೀಡಿದ್ದ ನೀರಿನ ಸರಬರಾಜನ್ನು ನಿಲ್ಲಿಸಲಾಯಿತು.
ಬೇಲೂರಿನ ರಸ್ತೆ ಬದಿಗಳಲ್ಲಿ ನಿಲ್ಲಿಸಿದ್ದ ಗುಜರಿ ವಾಹನಗಳ ತೆರವು
ಬೇಲೂರು ಪಟ್ಟಣದ ಮಲ್ಲಿಕಾರ್ಜುನ ಪೆಟ್ರೋಲ್ ಬಂಕ್, ಹಳೇಬೀಡು ರಸ್ತೆ,ಹಾಸನ , ಚಿಕ್ಕಮಗಳೂರು ರಸ್ತೆಯ ಫೂಟ್ಪಾತ್‌ನಲ್ಲಿ ಇಟ್ಟಿದ್ದ ಬೋರ್ಡ್ ಹಾಗೂ ಇನ್ನಿತರ ವಸ್ತುಗಳನ್ನು ತೆರವು ಮಾಡಲಾಯಿತು. ಪಟ್ಟಣದ ಹಳೇಬೀಡು, ಹಾಸನ, ಚಿಕ್ಕಮಗಳೂರು ಮುಖ್ಯರಸ್ತೆಯ ಇಕ್ಕೆಲಗಳಲ್ಲಿ ವಾಹನ ರಿಪೇರಿ ಸೇರಿದಂತೆ ಹಲವು ಬಗೆಯ ವ್ಯಾಪಾರಿಗಳು ಪಾದಚಾರಿ ಮಾರ್ಗದಲ್ಲಿ ಇಟ್ಟಿದ್ದ ಬೋರ್ಡ್ ಹಾಗೂ ಗುಜರಿಗೆ ಸೇರುವ ಹಳೆಯ ವಾಹನಗಳನ್ನು ನಿಲ್ಲಿಸಿದ್ದು, ಇದರಿಂದ ಜನರಿಗೆ ತೊಂದರೆಯಾಗುತ್ತಿದ್ದ ಕಾರಣ ಪುರಸಭೆ ಅಧ್ಯಕ್ಷ ಎ. ಆರ್‌ ಅಶೋಕ್ ನೇತೃತ್ವದಲ್ಲಿ ಅವುಗಳನ್ನೆಲ್ಲಾ ತೆರವು ಮಾಡಲಾಯಿತು.
ರಾಹುಲ್‌ಗಾಂಧಿ ಹೇಳಿಕೆ ಖಂಡಿಸಿ ಸಕಲೇಶಪುರದಲ್ಲಿ ಬಿಜೆಪಿ ಪ್ರತಿಭಟನೆ
ಕಳೆದ ಲೋಕಭಾ ಚುನಾವಣೆ ಸಂರ್ಧಭದಲ್ಲಿ ಬಿಜೆಪಿ ಪಕ್ಷ ಅಧಿಕಾರಕ್ಕೆ ಬಂದರೆ ಮೀಸಲಾತಿಯನ್ನು ರದ್ದುಪಡಿಸುತ್ತಾರೆ ಎಂದು ಅಪಪ್ರಚಾರ ಮಾಡಿದ ರಾಹುಲ್ ಗಾಂಧಿರವರು, ಇದೀಗ ದಲಿತರ ಮೀಸಲಾತಿಯನ್ನು ರದ್ದುಪಡಿಸಬೇಕೆಂದು ಆಗ್ರಹಿಸಿ ವಿದೇಶದಲ್ಲಿ ಮಾತನಾಡಿರುವುದು ಸಂವಿಧಾನ ವಿರೋಧಿ ಹೇಳಿಕೆಯಾಗಿದೆ. ಇದಲ್ಲದೆ ವಿದೇಶಗಳಿಗೆ ಅವರು ಹೋದಾಗ ಭಾರತ ವಿರೋಧಿ ಹೇಳಿಕೆಗಳನ್ನು ನೀಡುವುದು ಸಾಮಾನ್ಯವಾಗಿದೆ. ಇದನ್ನು ಭಾರತೀಯ ಜನತಾ ಪಕ್ಷ ಉಗ್ರವಾಗಿ ಖಂಡಿಸುತ್ತದೆ. ಈ ಹಿನ್ನೆಲೆಯಲ್ಲಿ ಲೋಕಸಭಾ ಸ್ಪೀಕರ್ ಕೂಡಲೆ ರಾಹುಲ್ ಗಾಂಧಿಯವರ ಸಂಸದ ಸ್ಥಾನವನ್ನು ರದ್ದುಪಡಿಸಲು ಕ್ರಮ ಕೈಗೊಳ್ಳಬೇಕು ಎಂದು ಶಾಸಕ ಸಿಮೆಂಟ್ ಮಂಜು ನೇತೃತ್ವದಲ್ಲಿ ಸಕಲೇಶಪುರದಲ್ಲಿ ಪ್ರತಿಭಟನೆ ನಡೆಸಲಾಯಿತು.
  • < previous
  • 1
  • ...
  • 205
  • 206
  • 207
  • 208
  • 209
  • 210
  • 211
  • 212
  • 213
  • ...
  • 417
  • next >
Top Stories
ಪಾಕ್‌ ಮಾನ ಹರಾಜಿಗೆ ಭಾರತ ಸಪ್ತಾಸ್ತ್ರ
ಭಾರತ- ಪಾಕ್‌ ಯುದ್ಧ ತಪ್ಪಿದ್ದುಎಂದಾದರೂ ಸಿಗಬಹುದಾದ ಹಿರಿಮೆಗಿಂತ ದೊಡ್ಡದು : ಟ್ರಂಪ್‌
ಇಬ್ಬರು ಶಂಕಿತ ಐಸಿಸ್‌ ಉಗ್ರರ ಬಂಧನ
ಪ್ರೊ ಕಬಡ್ಡಿ ಲೀಗ್‌: ನಾಲ್ವರನ್ನುರೀಟೈನ್‌ ಮಾಡಿಕೊಂಡ ಬುಲ್ಸ್‌
ವಾಘಾ ಗಡಿ ಪ್ರವೇಶಕ್ಕೆ ಅಪ್ಘನ್ ಟ್ರಕ್‌ಗಳಿಗೆ ಭಾರತ ಅನುಮತಿ
Asianet
Follow us on
  • Facebook
  • Twitter
  • Koo
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • Koo
  • YT video
  • insta
  • whatsapp
  • Popular Categories
  • ಪ್ರಪಂಚ
  • ಮನರಂಜನೆ
  • ವಿಶೇಷ
  • ಭಾರತ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved