• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • Hassan

Hassan

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ವಸತಿ ಶಾಲೆಗಳಲ್ಲಿ ಕನ್ನಡಪ್ರಭದ ಯುವ ಆವೃತ್ತಿ ಬಿಡುಗಡೆ
ಕನ್ನಡಪ್ರಭ ಪತ್ರಿಕೆಯು ಮಕ್ಕಳ ಸಂಚಿಕೆ ಹೊರ ತಂದಿದ್ದು, ನಾನು ಗಮನಿಸಿದಂತೆ ಪ್ರಸ್ತುತ ವಿದ್ಯಮಾನಗಳ ಬಗ್ಗೆ, ಪಠ್ಯ ಪುಸ್ತಕಗಳ ಬಗ್ಗೆ ಪ್ರಶ್ನೆ, ಉತ್ತರ ನೀಡಲಾಗುತ್ತಿದೆ. ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ಕೇಳಬಹುದಾದ ಪ್ರಶ್ನೆಗಳನ್ನು ನೀಡಲಾಗುತ್ತಿದೆ.
ಜಿಲ್ಲೆಯ ದಲಿತರ ಸಮಸ್ಯೆಗಳನ್ನು ಬಗೆಹರಿಸುವಂತೆ ದಲಿತ ಸಂಘಟನೆಗಳಿಂದ ಒತ್ತಾಯ
ನಮ್ಮ ದೇಶಕ್ಕೆ ಸ್ವಾತಂತ್ರ್ಯ ಲಭಿಸಿ ೭೮ ವರ್ಷಗಳು ಕಳೆದಿವೆ. ಮತ್ತೊಂದು ಕಡೆ ದೀನ, ದಲಿತ- ದುರ್ಬಲರ ಬದುಕು ಅಸಹನೀಯವಾಗಿ ನಿರ್ಲಕ್ಷ್ಯಕ್ಕೊಳಗಾಗಿದೆ.
ಸಭೆ, ಸಮಾರಂಭ ಯಶಸ್ವಿಯಾಗಲು ಪಾಕತಜ್ಞರ ಪಾತ್ರ ಬಹುಮುಖ್ಯ: ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಎಸ್. ರಘುನಾಥ್
ಪಾಕ ತಜ್ಞರು ಪರಿಶ್ರಮ ಮತ್ತು ತಮ್ಮ ಹಲವು ಸಮಸ್ಯೆಗಳ ನಡುವೆಯೂ ಅವರು ನೀಡುವ ಸೇವೆ ನಿಜಕ್ಕೂ ಸಂತೋಷದಾಯಕ ಎಂದು ಶ್ಲಾಘಿಸಿ, ಹಾಸನ ಜಿಲ್ಲಾ ಬ್ರಾಹ್ಮಣ ಮಹಾಸಭಾ ಸದಸ್ಯತ್ವವನ್ನು ಜಿಲ್ಲಾ ಸಮಾಜ ಬಾಂಧವರು ಪಡೆಯಬೇಕೆಂದು ಅವರು ಮನವಿ ಮಾಡಿದರು.
ನೆನೆಗುದಿಗೆ ಬಿದ್ದಿದ್ದ ಒಳಚರಂಡಿ ಕಾಮಗಾರಿ ಚುರುಕಿಗೆ ಕ್ರಮ: ಶಾಸಕ ಎ.ಮಂಜು
ಲೋಕೋಪಯೋಗಿ ಇಲಾಖೆ ಅಧಿಕಾರಿಗಳ ಸಭೆ ನಡೆಸಿದ ಶಾಸಕ ಮಂಜು, ಸರ್ಕಾರ ಶಾಸಕರ ನಿಧಿಯಲ್ಲಿ ಶೇ. 75ರಷ್ಟು ಅನುದಾನವನ್ನು ಇಲಾಖೆ ಕಾಮಗಾರಿಗೆ ಬಳಸುವಂತೆ ಸೂಚಿಸಿದೆ. ಕಾಮಗಾರಿಗಳ ಪಟ್ಟಿ ಸಿದ್ಧಪಡಿಸಿ, ಅದರಲ್ಲಿ ಅತ್ಯಂತ ತುರ್ತಾಗಿ ಆಗಬೇಕಿರುವ ಕಾಮಗಾರಿಗಳಿಗೆ ಆದ್ಯತೆ ನೀಡುವಂತೆ ಹಾಗೂ ಗುಣಮಟ್ಟದ ಕಾಮಗಾರಿ ನಡೆಸುವಂತೆ ಸೂಚಿಸಿದರು.
ಕನ್ನಡ ಸಾಹಿತ್ಯಕ್ಕೆ ತಿರುವು ನೀಡಿದವರು ಅನಕೃ
ಪ್ರಸ್ತುತ ಕನ್ನಡ ಭಾಷೆ ಇಷ್ಟೊಂದು ಉನ್ನತ ಸ್ಥಿತಿಯಲ್ಲಿ ವಿಜೃಂಭಿಸುತ್ತಿದೆ ಎಂದರೆ ಅದರ ದೊಡ್ಡ ಶ್ರೇಯಸ್ಸು ಅನಕೃ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ಸಾಹಿತಿ ಡಾ. ಹಂಪ ನಾಗರಾಜಯ್ಯ ತಿಳಿಸಿದರು. ಅನಕೃ ಭಾಷಣವನ್ನು ಎಲ್ಲರೂ ಕುಳಿತು ಕೇಳುತ್ತಿದ್ದರು. ಅವರು ಯುವಕರನ್ನು ಪ್ರೋತ್ಸಾಹಿಸುವ ವಾಕ್‌ಚಾತುರ್ಯ ಹೇಗಿತ್ತು ಎಂದರೆ, ಒಮ್ಮೆ ಅನಕೃ ಅವರನ್ನು ಭಾಷಣ ಮಾಡಲು ಕರೆಯಲು ಬಂದಾಗ, ಅವರನ್ನು ನನ್ನ ಕೊಠಡಿಗೆ ಕರೆದುಕೊಂಡು ಬಂದು ನೀವು ಇವರ ಊರಿಗೆ ಹೋಗಿ ಭಾಷಣ ಮಾಡಬೇಕೆಂದು ಹೇಳಿದರು. ಈ ವೇಳೆ ನೀವ್ಯಾಕೆ ಬಂದಿರಿ ನಾನೇ ಬರುತ್ತಿದ್ದೆ ಎಂದಾಗ ನಿಮ್ಮ ನೋಡಬೇಕು ಎನಿಸಿತು ಬಂದೆ ಎಂದು ಹೇಳಿದರು. ಅಂದರೆ, ಬೆಳೆಯುವ ಚೈತನ್ಯಕ್ಕೆ ಅವಕಾಶ ಒದಗಿಸಬೇಕು ಎಂದು ಹೇಳುತ್ತಿದ್ದರು ಎಂದರು.
ಮುಂದಿನ ಪೀಳಿಗೆಗಾಗಿ ಪರಿಸರವನ್ನು ಸಂರಕ್ಷಿಸಬೇಕಿದೆ
ಮುಂದಿನ ಪೀಳಿಗೆ ಆರೋಗ್ಯವಾಗಿರಲು ಪರಿಸರ ಅತ್ಯವಶ್ಯಕವಾಗಿದ್ದು, ಪರಿಸರವನ್ನು ರಕ್ಷಣೆ ಮಾಡುವುದರ ಜೊತೆಗೆ ಪ್ರತಿಯೊಬ್ಬರು ಪರಿಸರವನ್ನು ಉಳಿಸಿ ಬೆಳೆಸಬೇಕಾಗಿದೆ ಎಂದು ರೋಟರಿ ಜಿಲ್ಲಾ ಗವರ್ನರ್ ಕೆ. ಪಾಲಾಕ್ಷ ಹೇಳಿದರು. ಟೈಮ್ಸ್ ಗಂಗಾಧರ್ ಅವರು ಪ್ರತಿ ವರ್ಷ ೧೦ ಸಾವಿರ ಸಸಿಗಳನ್ನು ತಮ್ಮ ಶಾಲಾ ವಿದ್ಯಾರ್ಥಿಗಳಿಗೆ ಉಚಿತವಾಗಿ ನೀಡುತ್ತಿದ್ದಾರೆ, ಮಕ್ಕಳು ಹಾಗೂ ಪೋಷಕರು ಅವರ ಕಾಳಜಿಯನ್ನು ಅರ್ಥ ಮಾಡಿಕೊಂಡು ಸಸಿ ಪಡೆದು ಅವುಗಳನ್ನು ಸಂರಕ್ಷಿಸಿ ಮಕ್ಕಳನ್ನು ಹೇಗೆ ಜೋಪಾನವಾಗಿ ಬೆಳೆಸುತ್ತಾರೋ ಹಾಗೆ ಸಸಿಗಳನ್ನು ಬೆಳೆಸಬೇಕಾಗಿದೆ ಎಂದು ಹೇಳಿದರು.
ಅರೇಹಳ್ಳಿಯಲ್ಲಿ ಮನೆಮನೆಗೆ ಪೊಲೀಸ್‌ ಯೋಜನೆಗೆ ಚಾಲನೆ
ಮುಂದಿನ ದಿನಗಳಲ್ಲಿ ಮನೆ ಮನೆಗೆ ಪೊಲೀಸರು ಬಂದಾಗ ಪೊಲೀಸ್ ಇಲಾಖೆ ವ್ಯಾಪ್ತಿಗೊಳಪಡುವ ಯಾವುದೇ ಸಮಸ್ಯೆಗಳಿದ್ದರೂ ಆತಂಕ ಬಿಟ್ಟು ನಿರ್ಭಯವಾಗಿ ತಿಳಿಸಿ. ಅದರಿಂದ ನಿಮ್ಮ ಸಮಸ್ಯೆಗಳು ಸಾಧ್ಯವಾದಷ್ಟು ಮನೆಯಲ್ಲಿಯೇ ಬಗೆಹರಿಯುತ್ತದೆ. ಅಲ್ಲದೆ ಪೊಲೀಸರ ಹಾಗು ಸಾರ್ವಜನಿಕರ ನಡುವೆ ಉತ್ತಮ ಬಾಂಧವ್ಯ ವೃದ್ಧಿಯೊಂದಿಗೆ ಜನಸ್ನೇಹಿ ಪೊಲೀಸರಾಗಲು ಅವಕಾಶ ದೊರಕುತ್ತದೆ ಮತ್ತು ಸ್ವಾಸ್ಥ್ಯ ಸಮಾಜದ ನಿರ್ಮಾಣಕ್ಕೆ ಇದು ಸಹಕಾರಿಯಾಗುತ್ತದೆ ಎಂದರು. ಮನೆ ಮನೆಗೆ ಪೊಲೀಸ್ ಎಂಬ ವಿನೂತನ ಯೋಜನೆಯನ್ನು ರಾಜ್ಯಾದ್ಯಂತ ಜಾರಿಗೆ ತಂದಿದ್ದು ಈ ಹಿನ್ನೆಲೆಯಲ್ಲಿ ಅರೇಹಳ್ಳಿ ಪೊಲೀಸ್ ಠಾಣೆ ವತಿಯಿಂದ ಪಟ್ಟಣದ ಬಸ್ ನಿಲ್ದಾಣದ ಬಳಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ವಾಸವಿ ವನಿತ ಸಂಘದಿಂದ ವೈವಿಧ್ಯಮಯ ಆಹಾರ ಮೇಳ
ವಾಸವಿ ವನಿತಾ ಮಹಿಳಾ ಸಂಘದ ಅಧ್ಯಕ್ಷೆ ಜ್ಯೋತಿ ಸುರೇಶ್ ಮಾತನಾಡಿ, ನಮ್ಮ ಸಂಘದಿಂದ ವಿವಿಧ ಬಗೆಯ ರುಚಿಕರ ತಿನಿಸುಗಳನ್ನು ಒಂದೇ ಕಡೆ ಪರಿಚಯಿಸುವ ಉದ್ದೇಶದಿಂದ ಈ ಮೇಳ ಹಮ್ಮಿಕೊಳ್ಳಲಾಗಿದ್ದು ಸಾಂಪ್ರದಾಯಿಕ ಅಡುಗೆಗಳನ್ನು ಪರಿಚಯಿಸುತ್ತಿದ್ದೇವೆ. ಮನೆಯಲ್ಲಿ ಮಾಡಿದ ಖಾದ್ಯಗಳನ್ನು ತಯಾರಿಸಿದ ತಾಜಾ ಮತ್ತು ಆರೋಗ್ಯಕರ ಆಹಾರ ಪದಾರ್ಥಗಳನ್ನು ತಯಾರಿಸಿ ಮಾಡಿಕೊಂಡು ಬಂದಿದ್ದು ಈ ಒಂದು ಅಡುಗೆ ಮೇಳೆ ವಿಶೇಷ ಎನಿಸಿದೆ ಎಂದರು. ಎಲ್ಲರೂ ಜಂಕ್‌ಫುಡ್‌ಗಳ ರಾಸಾಯನಿಕ ಮಿಶ್ರಿತ ಆಹಾರ ಸೇವಿಸಿ ತಮ್ಮ ಆರೋಗ್ಯ ಕೆಡಿಸಿಕೊಳ್ಳುತ್ತಿದ್ದಾರೆ. ಅದು ಬಿಟ್ಟು ಮನೆಯಲ್ಲಿ ತಯಾರಿಸಿದ ಅಡುಗೆಗಳನ್ನು ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಬೇಕು ಎಂದರು.
ಆರೋಗ್ಯ ಇಲಾಖೆ ಸಿಬ್ಬಂದಿಗೆ ಹೆಪಟೈಟಿಸ್ ಬಿ ಲಸಿಕೆ
ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ರಾಷ್ಟ್ರೀಯ ವೈರಲ್ ಹೆಪಟೈಟಿಸ್ ನಿಯಂತ್ರಣ ಕಾರ್ಯಕ್ರಮ ಅಡಿಯಲ್ಲಿ ಆರೋಗ್ಯ ಇಲಾಖೆ ಸಿಬ್ಬಂದಿ ವರ್ಗದವರಿಗೆ ಹೆಪಟೈಟಿಸ್ ಬಿ ಲಸಿಕೆ ಹಾಕುವ ಕಾರ್ಯಕ್ರಮವನ್ನು ನಗರದ ಬೀರನಹಳ್ಳಿಯ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ನಡೆಸಲಾಯಿತು. ಹೆಪಟೈಟಿಸ್ ಬಿ ವಿಶ್ವದಲ್ಲಿ ಅತ್ಯಂತ ಗಂಭೀರವಾದ ಪಿತ್ತಜನಕಾಂಗದ ಸೋಂಕಿನ ಕಾಯಿಲೆ ಅಗಿದ್ದು, ಹೆಪಟೈಟಿಸ್ ಬಿ ವೈರಸ್ ಮೂಲಕ ಹರಡುತ್ತದೆ. ಈ ಕಾಯಿಲೆಯಿಂದ ೩೦ ಲಕ್ಷಕ್ಕೂ ಹೆಚ್ಚು ಜನರು ದೀರ್ಘಕಾಲದ ಸೋಂಕಿನಿಂದ ಬದುಕುತ್ತಿದ್ದಾರೆ. ೧ ಲಕ್ಷಕ್ಕೂ ಹೆಚ್ಚು ಜನ ಹೆಪಟೈಟಿಸ್ ಬಿ ವೈರಸ್‌ನಿಂದ ಸಾಯುತ್ತಿದ್ದಾರೆ ಎಂದರು.
ಅಕಾಲಿಕ ಸಾವುಗಳಿಗೆ ಅನಾರೋಗ್ಯವಷ್ಟೇ ಕಾರಣವಲ್ಲ
ಮನುಷ್ಯನ ದೇಹದಲ್ಲಿ ಆರೋಗ್ಯ ಸಮಸ್ಯೆ ಹಾಗೂ ಹೃದಯಾಘಾತ ಹೆಚ್ಚಾಗಲು ಆಹಾರ ಪದ್ದತಿಯೇ ಕಾರಣವಲ್ಲ. ಯಾಕೆಂದರೆ ನಿತ್ಯ ವ್ಯಾಯಾಮ ಮಾಡುವ, ನಿಯಮಿತವಾದ ಸಾತ್ವಿಕ ಆಹಾರವನ್ನೇ ಸೇವಿಸುವವರಿಗೂ ಹೃದಯಾಘಾತವಾಗಿದೆ. ಹೃದಯಾಘಾತಕ್ಕೆ ಮಾನಸಿಕ ಸ್ಥಿತಿ, ದ್ವೇಷ, ಅಹಂಕಾರ, ಅಸೂಯೆಯೂ ಕಾರಣವಾಗಿದೆ ಎಂದು ತಜ್ಞ ವೈದ್ಯರಾದ ವಿವೇಕ ಜಾಗೃತಿ ಬಳಗದ ಡಾ. ಮಾಧವ ಪೈ ತಿಳಿಸಿದರು. ನಮ್ಮ ಮಾನಸಿಕ ಮತ್ತು ದೈಹಿಕ ಆರೋಗ್ಯವನ್ನು ಉತ್ತಮ ಪಡಿಸಿಕೊಂಡು ಸದಾ ಸಕಾರಾತ್ಮಕ ಚಿಂತನೆಗಳಿಂದ ಮಾತ್ರ ಬದುಕಿರುವವರೆಗೂ ಆರೋಗ್ಯದಿಂದ ಇರಬಹುದು.
  • < previous
  • 1
  • ...
  • 76
  • 77
  • 78
  • 79
  • 80
  • 81
  • 82
  • 83
  • 84
  • ...
  • 550
  • next >
Top Stories
ತಿಂಗಳಿಗೆ 10,000 ರು. ಉಳಿಸಿದ ಮಾತ್ರಕ್ಕೆ ಶ್ರೀಮಂತರಾಗಲ್ಲ!
ರಾಜ್ಯದಲ್ಲಿ 3 ದಿನ ಮಳೆ : 5 ಜಿಲ್ಲೆ ಯೆಲ್ಲೋ ಅಲರ್ಟ್‌
ಫಿಲ್ಮ್ ಸಿಟಿ ನಿರ್ಮಾಣಕ್ಕೆ ಡಿಪಿಆರ್‌ ಸಿದ್ಧ : ಸಿಎಂ ಸಿದ್ದರಾಮಯ್ಯ
ಪ್ರಶಸ್ತಿ ಪಡೆದ ಸಿನಿಮಾಗಳು, ನಟ, ನಟಿಯರು
180 ಸ್ಥಳೀಯ ಸಂಸ್ಥೆಗಳ ಚುನಾವಣೆ ಸದ್ಯಕ್ಕೆ ಕಷ್ಟ : ಕೋರ್ಟ್‌ಗೆ ಸರ್ಕಾರ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved