ಜಿಟಿಡಿ ಅಸಮಾಧಾನ ಅವರ ವೈಯಕ್ತಿಕ ಸಮಸ್ಯೆಅವರಿಗೆ ವೈಯುಕ್ತಿಕ ಸಮಸ್ಯೆಗಳಿರಬಹುದು, ಆದರೆ ಅದು ಪಕ್ಷದ ಸಮಸ್ಯೆಯಲ್ಲ. ಅವರ ಅಸಮಾಧಾನ ವೈಯಕ್ತಿಕವಾಗಿ ಇರಬಹುದು, ಪರ್ಸನಲ್ ಅಜೆಂಡಾ ಇರಬಹುದು ನಮ್ಮ ಪಕ್ಷದಲ್ಲಿ ಗುಂಪುಗಾರಿಕೆ, ಗೊಂದಲಗಳಿಲ್ಲ ಎಂದು ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ತಿಳಿಸಿದರು. ಜೆಡಿಎಸ್ ಶಾಸಕ ಜಿ.ಟಿ. ದೇವೇಗೌಡ ಅವರ ಅಸಮಾಧಾನ ಕುರಿತಾಗಿ ಪ್ರತಿಕ್ರಿಯಿಸಿ, ನಮ್ಮ ಪಕ್ಷದಲ್ಲಿ ಯಾವುದೇ ಗೊಂದಲ ಇಲ್ಲ. ಜಿ. ಟಿ. ದೇವೇಗೌಡರು ಆಯಾ ಸಂದರ್ಭಕ್ಕೆ ಅನುಗುಣವಾಗಿ ಮಾತನಾಡುತ್ತಾರೆ ಒಂದೊಂದು ಬಾರಿ ಏಕವಚನದಲ್ಲಿ ಮಾತನಾಡಿದ್ದು ಉಂಟು ಎಂದರು.