ಆಳಂದ: ಚನ್ನಮಲ್ಲಯ್ಯ ಕಠಾರಿಮಠ ನಿಧನಸರ್ಕಾರಿ ಶಾಲಾ ಶಿಕ್ಷಕರಾಗಿದ್ದ ಚನ್ನಮಲ್ಲಯ್ಯಾ ಕಠಾರಿಮಠ ಅವರು ತಮ್ಮ ಇಡೀ ಸೇವಾವಧಿ ಸೇರಿ ನಿವೃತ್ತಿ ಬಳಿಕವೂ ಭಾರತ ಸೇವಾದಳ ಮೂಲಕ ರಾಜ್ಯದ ಶಾಲೆ, ಕಾಲೇಜುಗಳಲ್ಲಿ ರಾಷ್ಟ್ರಧ್ವಜ, ರಾಷ್ಟ್ರಗೀತೆ, ಯೋಗ ವಾಯಾಮದ ಕುರಿತು ಬೋಧಿಸಿ ಜಾಗೃತಿ ಮೂಡಿಸಿದ್ದರು. ಅವರ ಅಗಲಿಕೆಯಿಂದ ಭಾರತ ಸೇವಾದಳ ಹಾಗೂ ಶಿಕ್ಷಣ ಇಲಾಖೆಗೆ ತುಂಬಲಾರದ ನಷ್ಟವಾಗಿದೆ ಎಂದು ಭಾರತ ಸೇವಾಳ ಶೋಕವ್ಯಕ್ತಪಡಿಸಿದೆ.