ಮುಲ್ಲಾಮಾರಿ ಕಾಮಗಾರಿಯಲ್ಲಿ ಕಳಪೆ: ಮುತ್ತಂಗಿ ಆರೋಪಚಿಂಚೋಳಿ ತಾಲೂಕಿನಲ್ಲಿ ೧೯೭೩-೭೪ನೇ ಸಾಲಿನ ಬರಗಾಲ ಪರಿಹಾರ ಯೋಜನೆ ಅಡಿಯಲ್ಲಿ ಕೆಳದಂಡೆ ಮುಲ್ಲಾಮಾರಿ ನೀರಾವರಿ ಯೋಜನೆ ಅಭಿವೃದ್ಧಿ, ಮುಖ್ಯ ಕಾಲುವೆ ಆಧುನಿಕರಣಕ್ಕಾಗಿ ಹಾಗೂ ಪುರ್ನವಸತಿ ಕೇಂದ್ರಗಳಲ್ಲಿ ಮೂಲಭೂತ ಸೌಕರ್ಯ ಒದಗಿಸುವುದಕ್ಕಾಗಿ ಸಾಕಷ್ಟು ಅನುದಾನ ಮಂಜೂರಿಗೊಳಿಸಿದೆ. ಆದರೆ ಯೋಜನೆ ಅಡಿಯಲ್ಲಿ ಕೈಕೊಂಡಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳು ಸಾಕಷ್ಟು ಕಳೆಪೆ ಮಟ್ಟದಿಂದ ನಡೆದಿದ್ದು, ಅಲ್ಲದೇ ಅವುಗಳು ಇನ್ನುವರೆಗೆ ಪೂರ್ಣಗೊಳಿಸಿಲ್ಲ.