8 ವರ್ಷದ ಬಳಿಕ ಕನಕಗಿರಿಗೆ ಪ್ರಜಾಸೌಧಕನಕಗಿರಿ ತಾಲೂಕು ಘೋಷಣೆಯಾದಾಗಿನಿಂದ ತಾಲೂಕು ಕಚೇರಿ ನಿರ್ಮಾಣಕ್ಕೆ ಪಟ್ಟಣದ ಎಂಟು ದಿಕ್ಕುಗಳಲ್ಲಿ ಜಾಗೆ ಪರಿಶೀಲಿಸಿ ಕೈಬಿಡಲಾಗುತ್ತಿತ್ತು. ನಾಲ್ಕೈದು ವರ್ಷ ಅಧಿಕಾರಿಗಳು, ಮಾಜಿ ಶಾಸಕ ಬಸವರಾಜ ದಢೇಸೂಗುರು, ಹಾಲಿ ಸಚಿವ ಶಿವರಾಜ ತಂಗಡಗಿ ಜಾಗೆ ಪರಿಶೀಲನೆ ತೊಡಗಿದ್ದರು. ಇದೀಗ ೧೮೭ ಹಾಗೂ ೧೮೯ರ ಸರ್ವೇ ನಂಬರಲ್ಲಿ ಪ್ರಜಾ ಸೌಧ ನಿರ್ಮಾಣಕ್ಕೆ ಕಂದಾಯ ಇಲಾಖೆ ಮುಂದಾಗಿದೆ.