ಕನ್ನಡ, ಕನ್ನಡಿಗರ ‘ಭದ್ರಕೋಟೆ’ ಮಂಡ್ಯ ಜಿಲ್ಲೆ..!ಮಂಡ್ಯ ಜಿಲ್ಲೆ ಉದಯವಾದ ನಂತರದಿಂದಲೂ ಹಲವು ಮಹತ್ವದ ಹೋರಾಟಗಳಿಗೆ ಜಿಲ್ಲೆ ಹೆಸರುವಾಸಿಯಾಗಿದೆ. ಅಲ್ಲದೇ, ಮಂಡ್ಯ ಜಿಲ್ಲೆ ಕನ್ನಡದ ಹಲವು ಪ್ರಥಮಗಳ ತವರೂರು. ಜಿಲ್ಲೆಯ ಹಲವಾರು ಕವಿಗಳು, ಸಾಹಿತಿಗಳು, ಬರಹಗಾರರು ಕನ್ನಡಕ್ಕೆ ತಮ್ಮದೇ ಆದ ಕೊಡುಗೆ ನೀಡಿ ಕನ್ನಡದ ಕೀರ್ತಿ ಪತಾಕೆಯನ್ನು ಎತ್ತಿ ಹಿಡಿದಿದ್ದಾರೆ.