• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news

karnataka-news

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾದಂತೆ ಕಣ್ಣು ಮಂಜಾಗುತ್ತದೆ
ರಕ್ತದಲ್ಲಿ ಸಕ್ಕರೆ ಪ್ರಮಾಣ ಹೆಚ್ಚಾಗುತ್ತಾ ಹೋದಂತೆ ಕಣ್ಣುಗಳು ಮಂಜಾಗುವುದು ಸಹಜ ಎಂದು ಹಾಸನದ ಅಮ್ಮ ಕಣ್ಣಿನ ಆಸ್ಪತ್ರೆ ಡಾ. ಸ್ಮಿತಾ ತಿಳಿಸಿದರು. ಸಿದ್ಧ ಆಹಾರ, ರಸ್ತೆ ಬದಿ ತಯಾರಿಸುವ ಆಹಾರ ಬಳಸುವುದರಿಂದ ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಇದರಿಂದ ರಕ್ತದಲ್ಲಿ ಅಧಿಕ ಸಕ್ಕರೆ ಪ್ರಮಾಣ ವೃದ್ಧಿಸುವುದರಿಂದ ಕಣ್ಣಿನ ದೃಷ್ಟಿಯಲ್ಲಿ ವ್ಯತ್ಯಾಸ ಉಂಟಾಗುತ್ತದೆ. ಪುಟ್ಟ ಮಕ್ಕಳು ಮೊಬೈಲ್ ಬಳಸುವುದರಿಂದ ಕಣ್ಣು ದೋಷಕ್ಕೀಡಾಗುತ್ತಿದ್ದಾರೆ. ಪೋಷಕರು ಸಾಧ್ಯವಾದಷ್ಟು ಮಕ್ಕಳು ಮೊಬೈಲ್ ಕಡಿಮೆ ಬಳಸುವಂತೆ ಜಾಗ್ರತೆ ವಹಿಸಬೇಕು ಎಂದರು.
ನಿರಂತರ ಕನ್ನಡ ಕಾರ್ಯಕ್ರಮಕ್ಕಾಗಿ ಸಮಿತಿ ರಚಿಸಿ
ಕೆಜಿಎಫ್ ನಗರದಲ್ಲಿ ಕನ್ನಡ ಭಾಷೆಯನ್ನು ಹೋರಾಟದ ಮೂಲಕ ಕಟ್ಟಿ ಬೆಳೆಸಿದ್ದಾರೆ. ಆದರೆ ನಗರಸಭೆ ವತಿಯಿಂದ ನಗರದ ಕುವೆಂಪು ಬಸ್ ನಿಲ್ದಾಣದಲ್ಲಿ ರಾಷ್ಟ್ರಕವಿ ಕುವೆಂಪು ರವರ ಪ್ರತಿಮೆಯನ್ನು ಸ್ವಾಗತ ಕಮಾನಿನ ಮೇಲೆ ಹಾಕಿರುವುದರಿಂದ ಅವರ ಹುಟ್ಟು ಹಬ್ಬದಂದು ಮಾಲಾರ್ಪಣೆ ಮಾಡಲು ಸಾಧ್ಯವಾಗುತ್ತಿಲ್ಲ. ಪ್ರತಿಮೆಗೆ ಮಾರ್ಲಾಪಣೆ ಮಾಡಲು ವ್ಯವಸ್ಥೆ ಮಾಡಬೇಕು.
ಪಿಡಿಒಗಳ ನಿರ್ಲಕ್ಷ್ಯದಿಂದ ಫಲಾನುಭವಿಗಳ ಗುರುತಿಸಲು ಅಡಚಣೆ
ಪಿಡಿಒಗಳು ಸರಿಯಾದ ರೀತಿಯಲ್ಲಿ ಕಾರ್ಯನಿರ್ವಹಿಸದೆ ಇರುವುದರಿಂದ ಸರ್ಕಾರಿ ಯೋಜನೆಗಳ ಫಲಾನುಭವಿಗಳನ್ನು ಗುರುತಿಸಲು ತೀವ್ರ ಅಡಚಣೆ ಉಂಟಾಗಿದೆ ಎಂದು ಶಾಸಕ ಕೆ.ಎಂ. ಶಿವಲಿಂಗೇಗೌಡ ತಿಳಿಸಿದ್ದಾರೆ. ಸಭೆಗೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಜರಿರುತ್ತಿದ್ದು, ತಮ್ಮ ಇಲಾಖೆ ಸಂಬಂಧಿಸಿದ ಪ್ರಶ್ನೆಗಳಿಗೆ ತಕ್ಷಣವೇ ಸ್ಪಂದಿಸಬೇಕು. ಸಾರ್ವಜನಿಕರ ಸಮಸ್ಯೆಗಳನ್ನು ಬಗೆಹರಿಸಲು ಎಲ್ಲ ಅಧಿಕಾರಿಗಳು ಪ್ರಾಮಾಣಿಕವಾಗಿ ಮತ್ತು ಕರ್ತವ್ಯದ ಹೊಣೆಗಾರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚನೆ ನೀಡಿದರು.
ಲಾಡ್ಜ್‌ನಲ್ಲಿ ತಂಗಿದ್ದ ಪದವಿ ವಿದ್ಯಾರ್ಥಿ ಶಂಕಾಸ್ಪದ ಸಾವು
ತನ್ನ ಸ್ನೇಹಿತೆ ಜತೆ ಬಂದು ಲಾಡ್ಜ್‌ನಲ್ಲಿ ತಂಗಿದ್ದ ಪದವಿ ವಿದ್ಯಾರ್ಥಿಯೊಬ್ಬ ಶಂಕಾಸ್ಪದವಾಗಿ ಸಾವನ್ನಪ್ಪಿರುವ ಘಟನೆ ಮಡಿವಾಳ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಖೋಟಾನೋಟು ಚಲಾವಣೆ ಯತ್ನ:ಹೊರ ರಾಜ್ಯದ ಮೂವರ ಬಂಧನ
ನಗರದಲ್ಲಿ ಖೋಟಾನೋಟು ಚಲಾವಣೆಗೆ ಯತ್ನಿಸಿದ್ದ ಹೊರ ರಾಜ್ಯದ ಮೂವರನ್ನು ಜಯನಗರ ಠಾಣೆ ಪೊಲೀಸರು ಸೆರೆ ಹಿಡಿದಿದ್ದಾರೆ.
ಟಿಎಪಿಸಿಎಂಎಸ್ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳಿಂದ ಬಿರುಸಿನ ಪ್ರಚಾರ
ಚನ್ನರಾಯಪಟ್ಟಣ ತಾಲೂಕು ಟಿಎಪಿಸಿಎಂಎಸ್ ನಡೆಯುವ ಹಿನ್ನೆಲೆಯಲ್ಲಿ ಜೆಡಿಎಸ್ ಬೆಂಬಲಿತ ಅಭ್ಯರ್ಥಿಗಳು ಹೋಬಳಿ ವಿವಿಧಡೆ ಶುಕ್ರವಾರ ಬಿರುಸಿನ ಪ್ರಚಾರ ನಡೆಸಿದರು. ಕಾಂಗ್ರೆಸ್ ಹಾಗೂ ಜೆಡಿಎಸ್ ಮತ್ತು ಬಿಜೆಪಿಯ ಓರ್ವ ಅಭ್ಯರ್ಥಿ ಹಾಗೂ ಇತರರ ನಡುವೆ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ಮಾಜಿ ಟಿಎಪಿಸಿಎಂಎಸ್ ಅಧ್ಯಕ್ಷ ಹಾಲಿ ಅಭ್ಯರ್ಥಿ ಕುಂಬಾರಹಳ್ಳಿ ರಮೇಶ್ ಮಾತನಾಡಿ, ಹಿಂದೆ ನಷ್ಟದಲ್ಲಿದ್ದ ಟಿಎಪಿಸಿಎಂಎಸ್ ಕ್ಷೇತ್ರದ ಶಾಸಕರಾದ ಸಿ ಎನ್ ಬಾಲಕೃಷ್ಣ ಹಾಗೂ ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಲದ ನಿರ್ದೇಶಕ ಸಿಎನ್ ಮಂಜುನಾಥ್ ಅವರ ಸಹಕಾರದಿಂದ ಇಂದು ಪ್ರಸ್ತುತ ಲಾಭದಲ್ಲಿದೆ. ಮುಂಬರುವ ದಿನಗಳಲ್ಲೂ ಸಂಘ ಇನ್ನಷ್ಟು ಅಭಿವೃದ್ಧಿ ಹೊಂದಲು ಪುನಃ ಜೆಡಿಎಸ್ ಪಕ್ಷದ ನಿರ್ದೇಶಕರು ಆಡಳಿತ ಮಂಡಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಆಯ್ಕೆಗೊಂಡರೆ ಸಾಧ್ಯವಾಗುತ್ತದೆ ಎಂದರು.
ಹಾಸನಾಂಬೆ ದರ್ಶನಕ್ಕೆ ಹತ್ತನೇ ದಿನವೂ ಭಕ್ತಸಾಗರ
ಹಾಸನಾಂಬೆ ದೇವಿ ಸಾರ್ವಜನಿಕ ದರ್ಶನದ ಹತ್ತನೇ ದಿನವಾದ ಶನಿವಾರ ಹಾಸನ ನಗರವು ಭಕ್ತರ ಮಹಾಸಾಗರದಿಂದ ತುಂಬಿಹೋಗಿತ್ತು. ಬೆಳಿಗ್ಗೆ ಮೂರು ಗಂಟೆಯಿಂದಲೇ ಸಾವಿರಾರು ಭಕ್ತರು ಧರ್ಮ ದರ್ಶನ ಮತ್ತು ವಿಶೇಷ ದರ್ಶನ ಸಾಲಿನಲ್ಲಿ ಸತತ ಹತ್ತು ಗಟೆಗಳಂ ಕಾಲ ನಿಂತು ದೇವಿಯ ದರ್ಶನ ಪಡೆದರು. ದೇವಾಲಯ ಸಮಿತಿಯ ಆಡಳಿತಾಧಿಕಾರಿ ಮಾರುತಿ ಅವರು, ಸಚಿವರು ಸ್ವತಃ ಹಾಜರಿಲ್ಲದಿದ್ದರೆ ಅವರ ಕುಟುಂಬ ಸದಸ್ಯರಿಗೂ ಪ್ರತ್ಯೇಕ ದರ್ಶನಕ್ಕೆ ಅವಕಾಶವಿಲ್ಲ. ಉಸ್ತುವಾರಿ ಸಚಿವ ಕೃಷ್ಣ ಬೈರೇಗೌಡ ಅವರ ಸೂಚನೆಯಂತೆ ಈ ನಿಯಮ ಜಾರಿಯಲ್ಲಿದೆ ಎಂದು ತಿಳಿಸಿದ್ದಾರೆ.
ಮೃತರ ಕುಟುಂಬಕ್ಕೆ ಸರ್ಕಾರಿ ನೌಕರಿ ನೀಡಿ
ತಾಲೂಕಿನ ಹೊಂಗನೂರು ಗ್ರಾಮ ಪಂಚಾಯಿತಿ ವಾಟರ್‌ಮೆನ್ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ಕುಟುಂಬಕ್ಕೆ ಸರ್ಕಾರ ಹಾಗೂ ಜಿಲ್ಲಾಡಳಿತ ನುಡಿದಂತೆ ಸರ್ಕಾರಿ ನೌಕರಿ ನೀಡಿ, ಕುಟುಂಬಕ್ಕೆ ೫೦ ಲಕ್ಷ ರು. ಪರಿಹಾರ ನೀಡಬೇಕೆಂದು ಜಿಲ್ಲಾ ಬಿಜೆಪಿ ಅಧ್ಯಕ್ಷ ಹಾಗೂ ಮಾಜಿ ಶಾಸಕ ಸಿ. ಎಸ್. ನಿರಂಜನ್‌ಕುಮಾರ್ ಒತ್ತಾಯಿಸಿದರು.
ಆರ್‌ಎಸ್‌ಎಸ್ ಬಗ್ಗೆ ಅಜ್ಞಾನದಿಂದ ಮಾತನಾಡಬೇಡಿ
ಯಾರೂ ಆರ್‌ಎಸ್‌ಎಸ್ ಬಗ್ಗೆ ಅಜ್ಞಾನದಿಂದ ಮಾತನಾಡಬೇಡಿ. ಅದು ರಾಷ್ಟ್ರಪ್ರೇಮ ಬೆಳೆಸುವ ಸಂಸ್ಥೆಯಾಗಿದ್ದು, ಶತಮಾನೋತ್ಸವ ಆಚರಣೆಯ ವೇಳೆ ಟೀಕೆ ಮಾಡುತ್ತಿರುವುದು ಸರಿಯಲ್ಲ ಎಂದು ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪ್ರೀತಂ ಜೆ. ಗೌಡ ತಿಳಿಸಿದರು. ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ ಕೆಲವು ಮಂದಿ ಆರ್‌ಎಸ್‌ಎಸ್ ಬಗ್ಗೆ ವೈಚಾರಿಕ ಅಜ್ಞಾನದಿಂದ ಟೀಕೆ ಮಾಡುತ್ತಿದ್ದಾರೆ. ಆರ್‌ಎಸ್‌ಎಸ್ ಸಂಸ್ಥೆ ಧರ್ಮರಕ್ಷಣೆ, ರಾಷ್ಟ್ರೀಯತೆ ಮತ್ತು ಸಮಾಜ ಸೇವೆಯ ತತ್ವವನ್ನು ಬೋಧಿಸುತ್ತಿದೆ. ಅದರ ಬಗ್ಗೆ ಮಾತನಾಡಬೇಕಾದರೆ ಜವಾಬ್ದಾರಿಯಿಂದ ಮಾತನಾಡಬೇಕು. ವಿಚಾರ ತಿಳಿಯದೆ ಗಾಳಿಯಲ್ಲಿ ಗುಂಡು ಹೊಡೆಯಬಾರದು ಎಂದು ಎಚ್ಚರಿಸಿದರು.
ಈ ಸರ್ಕಾರಕ್ಕೆ ಕಿವಿಯೂ ಇಲ್ಲ ಕಣ್ಣೂ ಇಲ್ಲ
ಈ ಕಾಂಗ್ರೆಸ್ ಸರಕಾರಕ್ಕೆ ಕಿವಿಯೂ ಇಲ್ಲ, ಕಣ್ಣೂ ಇಲ್ಲದಂತಾಗಿದ್ದು, ಒಂದು ರೀತಿ ಇದು ಬಾಯಿಬಡುಕ ಸರಕಾರವಾಗಿದೆ ಎಂದು ಸರ್ಕಾರದ ವಿರುದ್ಧ ಮಾಜಿ ಸಚಿವ ಹಾಗೂ ಶಾಸಕ ಸುನೀಲ್ ಕುಮಾರ್ ತೀವ್ರ ವಾಗ್ದಾಳಿ ನಡೆಸಿದರು. ಹುಟ್ಟುಕಾಣದ, ಹುಟ್ಟುಕಿವುಡರಿಗೆ ಅಧಿಕಾರ ಕೊಟ್ಟಿದ್ದರೂ ಜನರ ಕಷ್ಟ ಗೊತ್ತಾಗುತ್ತಿತ್ತು. ಆದರೆ ಈ ಸರ್ಕಾರಕ್ಕೆ ಕಣ್ಣು ಕಾಣುವುದಿಲ್ಲ, ಕಿವಿಯೂ ಕೇಳುವುದಿಲ್ಲ. ಜನರ ಸಮಸ್ಯೆ ಬಿಟ್ಟು ಮೀಡಿಯಾ ಮುಂದೆ ಬಂದು ಸಂಬಂಧವಿಲ್ಲದ ವಿಷಯಗಳಲ್ಲಿ ಬಾಯಿ ಬಡಿದುಕೊಳ್ಳುತ್ತದೆ ಎಂದರು.
  • < previous
  • 1
  • ...
  • 26
  • 27
  • 28
  • 29
  • 30
  • 31
  • 32
  • 33
  • 34
  • ...
  • 14193
  • next >
Top Stories
ಕೌನ್‌ ಬನೇಗ ಕರೋಡ್‌ಪತಿಯಲ್ಲಿ ಗೆದ್ದ ಹಣ ದೈವ ನರ್ತಕರಿಗೆ ಮತ್ತು ಸರ್ಕಾರಿ ಶಾಲೆಗೆ : ರಿಷಬ್ ಶೆಟ್ಟಿ
ತಲೆ ಬಾಚ್ಕಳಿ, ರಾಯರಡ್ಡಿ ಕಟ್ಟುವ ಧರ್ಮ ಸೇರಿಕೊಳ್ಳಿ: ಅತ್ತೆ ಬೈದರೆ ಬೇಜಾರ್‌ ಮಾಡ್ಕೋಬೇಡಿ ಅಂತಾರೆ ಜಡ್ಜ್‌
ಸಿಎಂ, ಡಿಸಿಎಂ, ಸಚಿವರು ಅಹಂಕಾರದ ಮಾತು ಕೈಬಿಡಲಿ : ಕೇಂದ್ರ ಸಚಿವ ಜೋಶಿ
ನನ್ನ ಆದೇಶವನ್ನು ಕಾಂಗ್ರೆಸ್ಸಿಗರು ಸರಿಯಾಗಿ ಓದಿಕೊಳ್ಳಲಿ : ಶೆಟ್ಟರ್‌
ಪಥಸಂಚಲನ ತಡೆಯಲೆತ್ನಿಸಿದ ವ್ಯಕ್ತಿಗಳಿಗೆ ಮುಖಭಂಗ : ಬಿವೈವಿ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved