ಭ್ರೂಣ ಹತ್ಯೆ ಬಗ್ಗೆ ಜಾಗೃತಿ ಇಲ್ಲದಿರುವುದು ಬೇಸರದ ಸಂಗತಿಆರತಿಗೊಂದು ಕೀರ್ತಿಗೊಂದು ಮಗು ಬೇಕು ಎನ್ನುವ ಕಾಲ ದೂರವಾಗಿದೆ. ಅತಿಯಾದ ಸಂಪತ್ತನ್ನು ಸಂಗ್ರಹಿಸುವ ಸ್ವಾರ್ಥ, ಸಂಪ್ರದಾಯ, ಕಂದಾಚಾರಗಳು ಯಾವ ದೇಶ, ಸಮಾಜದಲ್ಲಿ ಇರುತ್ತವೆಯೋ, ಆ ದೇಶ, ಸಮಾಜ ಬಹುತೇಕ ಅಂತ್ಯವಾಗುತ್ತದೆ ಎಂದು ಕರ್ನಾಟಕ ಜಾನಪದ ವಿವಿಯ ಕುಲಪತಿ ಪ್ರೊ. ಟಿ.ಎಂ. ಭಾಸ್ಕರ್ ಹೇಳಿದರು.