ಜವಳಗೇರಾ: 80 ಭೂ ಹೋರಾಟಗಾರರ ಬಂಧನಕಳೆದ ೭೦ ದಿನಗಳಿಂದ ಕರ್ನಾಟಕ ರೈತ ಸಂಘ ಮತ್ತು ಸಿಪಿಐಎಂಎಲ್ ರೆಡ್ ಸ್ಟಾರ್ ನೇತೃತ್ವದಲ್ಲಿ ಭೂ ರಹಿತ ರೈತರಿಗೆ ಘೋಷಿತ ಹೆಚ್ಚುವರಿ ಜಮೀನನ್ನು ವಿತರಿಸುವಂತೆ ಆಗ್ರಹಿಸಿ ಸಿಂಧನೂರು ಸೀಮಾದಲ್ಲಿರುವ ಸರ್ವೆ ನಂ.೪೧೯ರಲ್ಲಿ ಧರಣಿ ನಡೆದಿದ್ದು, ಸರ್ಕಾರ ಸಮರ್ಪಕವಾಗಿ ಸ್ಪಂದಿಸಿಲ್ಲ ಎಂದು ಆರೋಪಿಸಿ ಗುರುವಾರ ಪ್ರತಿಭಟನಾ ಸಮಾವೇಶ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ 80 ಜನರನ್ನು ಪೊಲೀಸರು ಬಂಧಿಸಿದ್ದಾರೆ.