• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • shivamogga

shivamogga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಜ.2ರಂದು 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನ
ಸಾಹಿತ್ಯ, ಸಾಹಿತಿಯ ಅವತಾರ ಆಗಬೇಕಾದರೆ ಅದಕ್ಕೆ ವಯಸ್ಸಿನ ಅಂತರವಿಲ್ಲ. ಚಿಕ್ಕಂದಿನಿಂದಲೇ ಮಕ್ಕಳಿಗೆ ಸಾಹಿತ್ಯ ಹವ್ಯಾಸ ಬೆಳೆಸಿದರೆ ಅವರು ಭವಿಷ್ಯದಲ್ಲಿ ದೇಶಕ್ಕೆ ಆಸ್ತಿಯಾಗುತ್ತಾರೆ ಎಂಬ ನಿಟ್ಟಿನಲ್ಲಿ ಮಕ್ಕಳ ಸಾಹಿತ್ಯ ಸಮ್ಮೇಳನಗಳು ಜಾರಿಯಲ್ಲಿವೆ. ಭದ್ರಾವತಿಯಲ್ಲೂ 10ನೇ ಮಕ್ಕಳ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಜ.2ರಂದು ವೇದಿಕೆ ಸಜ್ಜಾಗಿದೆ. ಸತ್ಯಸಾಯಿ ಪ್ರೌಢಶಾಲೆ ವಿದ್ಯಾರ್ಥಿನಿ ಕೆ.ಆರ್.ಸೇವಂತಿ ಸಮ್ಮೇಳನಾಧ್ಯಕ್ಷೆಯಾಗಿ ಆಯ್ಕೆಯಾಗಿದ್ದಾರೆ ಎಂದು ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ತಾಲೂಕು ಅಧ್ಯಕ್ಷೆ ಎಂ.ಎಸ್. ಸುಧಾಮಣಿ ಹೇಳಿದ್ದಾರೆ.
ಗುಡ್‌ ಬೈ 2023, ವೆಲ್‌ ಕಮ್‌ 2024
ಹೊಸ ವರ್ಷವನ್ನು ಶಿವಮೊಗ್ಗ ಜಿಲ್ಲೆ ಜನತೆ ಸಂಭ್ರಮದಿಂದ ಬರಮಾಡಿಕೊಂಡಿದ್ದು, ವರ್ಷಪೂರ್ತಿ ಬೇಸರ-ಕಾತರ, ನೋವು-ನಲುವಿನ ಜೊತೆ ಸಾಗಿದ ಜನರು ಭಾನುವಾರ ಇವೆಲ್ಲದಕ್ಕೂ ಸಣ್ಣ ವಿರಾಮ ಕೊಟ್ಟು, ಒಂದೊಳ್ಳೆಯ ಪಾರ್ಟಿಗೆ ಸಿದ್ಧವಾಗಿದ್ದರು. ಹೊಸ ವರ್ಷವನ್ನು ಫ್ರೆಂಡ್ಸ್‌, ಫ್ಯಾಮಿಲಿ ಜೊತೆ ಕಳೆದರೆ, ಅನೇಕರು ಕೆಲಸದ ಜೊತೆ ಹೊಸ ವರ್ಷವನ್ನು ಸಂಭ್ರಮಿಸಿದರು. ಇನ್ನೊಂದಿಷ್ಟು ಮಂದಿ ಪಾರ್ಟಿ ಮೂಡ್‌ಗೆ ಜಾರಿದ್ದರು.
ಶಿವಮೊಗ್ಗದಲ್ಲಿ ಗಾಳಿಯಲ್ಲಿ ಗುಂಡು: ಇಬ್ಬರು ಪೊಲೀಸರ ವಶಕ್ಕೆ
ಬಂದೂಕು, ಪಿಸ್ತೂಲು ಯಾರ ಕೈಗೂ ಸಿಗದಂತೆ ಇಡಬೇಕು. ಆದರೆ, ಅವುಗಳ ಬಗ್ಗೆ ನಿರ್ಲಕ್ಷ್ಯ ತಳೆದಾಗ ಆಗುವ ಅಪಾಯಗಳು ವಿಪರೀತ ಎಂಬುದಕ್ಕೆ ಈಗಾಗಲೇ ಹಲವಾರು ನಿದರ್ಶನಗಳು ಘಟಿಸಿವೆ. ಶಿವಮೊಗ್ಗದಲ್ಲೂ ಯುವಕರಿಬ್ಬರು ಕಾರಿನಲ್ಲಿ ಬಂದು ಗಾಳಿಯಲ್ಲಿ ಏರ್‌ ಗನ್‌ನಿಂದ ಗುಂಡು ಹಾರಿಸಿ, ಈಗ ಪೊಲೀಸರ ಅತಿಥಿಗಳಾಗಿದ್ದಾರೆ.
ಹೆಜ್ಜೇನು ದಾಳಿಯಲ್ಲಿ ಗುಡ್ಡೇಕೊಪ್ಪ ವ್ಯಕ್ತಿ ಸಾವು
ಮನುಷ್ಯ ಎಷ್ಟೇ ಗಟ್ಟಿ, ಕಟ್ಟುಮಸ್ತಾಗಿದ್ದರೂ, ಸಣ್ಣ ಕಾರಣ ಅವನ ಪ್ರಾಣಹರಣಕ್ಕೆ ಕಾರಣ ಆಗಬಹುದು ಎಂಬುದಕ್ಕೆ ವ್ಯಕ್ತಿಯೊಬ್ಬರ ಸಾವು ಸಾಕ್ಷಿಯಾಗಿದೆ. ಸೊರಬ ತಾಲೂಕಿನ ಗುಡ್ಡೇಕೊಪ್ಪ ಗ್ರಾಮದ ಕೃಷಿಕ ಪಂಚಾಕ್ಷರಯ್ಯಗೆ ಶನಿವಾರ ಹೆಜ್ಜೇನು ಕಡಿದಿದ್ದು, ಅವರು ಮೃತಪಟ್ಟಿದ್ದಾರೆ.
ಶಾಲಾ ಶೌಚಾಲಯಗಳ ಸ್ವಚ್ಛತೆ ಸಮಸ್ಯೆಗೆ ಶಾಶ್ವತ ಪರಿಹಾರ
ಸರ್ಕಾರಿ ಶಾಲೆಗಳಲ್ಲಿ ಮೂಲಸೌಕರ್ಯ ಕೊರತೆ ದೊಡ್ಡ ಪಿಡುಗು. ಈ ಸಮಸ್ಯೆ ನಿವಾರಣೆಗೆ ಸರ್ಕಾರಗಳಿಂದ ಗಂಭೀರ ಚಿಂತನೆಯೂ ಆಗುತ್ತಿಲ್ಲ, ಕಾರ್ಯ ಯೋಜನೆಗಳೂ ಸಮರ್ಪಕವಾಗಿ ನಡೆಯುತ್ತಿಲ್ಲ. ಶೌಚಾಲಯಗಳನ್ನು ಸ್ವಚ್ಛಗೊಳಿಸುವಂತಹ ದೌರ್ಭಾಗ್ಯ ವಿದ್ಯಾರ್ಥಿಗಳಿಗೆ ಎಂದಿಗೂ ಬರಬಾರದು ಎಂದು ಶಿಕ್ಷಣ ಸಚಿವರು ಹೇಳಿದ್ದು, ಶಾಲಾ ಶೌಚಾಲಯಗಳ ಸ್ವಚ್ಚತೆ ಸಮಸ್ಯೆಗೆ ಶಾಶ್ವತ ಪರಿಹಾರ ರೂಪಿಸಲಾಗುವುದು ಎಂದು ತೀರ್ಥಹಳ್ಳಿಯಲ್ಲಿ ಭರವಸೆ ನೀಡಿದ್ದಾರೆ.
ಕೋಟ್ಯಂತರ ರು. ಮೌಲ್ಯದ ಚಿನ್ನಾಭರಣ, ವಾಹನ, ನಗದು ಹಸ್ತಾಂತರ
ಸಾರ್ವಜನಿಕರ ರಕ್ಷಣೆಯನ್ನೇ ಉಸಿರಾಗಿಸಿಕೊಂಡ ಪೊಲೀಸ್‌ ಇಲಾಖೆ ಸಾಧನೆಗಳು ಒಂದಲ್ಲ, ಎರಡಲ್ಲ. ಪ್ರತಿನಿತ್ಯ ಪ್ರಾಣ ಒತ್ತೆಯಿಟ್ಟು ಕೆಲಸ ಮಾಡುವ ಅವರು ಜನರ ನೆಮ್ಮದಿಗೆ ಕಾರಣರಾಗಿದ್ದಾರೆ. ಕಳೆದುಹೋದ ವಸ್ತುಗಳನ್ನು ಹುಡುಕಿ, ಅರ್ಹ ಮಾಲೀಕರಿಗೆ ತಲುಪಿಸುವಲ್ಲಿ ಅವರ ಶ್ರಮ, ಸೇವೆ ಶ್ಲಾಘನೀಯ. ಶಿವಮೊಗ್ಗದಲ್ಲಿ ಸಹ ಶನಿವಾರ ಇಂಥ ಆಸ್ತಿ ಮರಳಿಸುವ ಪರೇಡ್‌ ಜಿಲ್ಲಾ ಎಸ್‌ಪಿ ಮಿಥುನ್‌ಕುಮಾರ್ ನೇತೃತ್ವ ನಡೆದಿದೆ.
ಕಾಂಗ್ರೆಸ್‌ನಿಂದ ಜನವಿರೋಧಿ ಆಡಳಿತ: ಕೆ.ಅಜ್ಜಪ್ಪ ಆರೋಪ
ರಾಜಕೀಯ ಪಕ್ಷಗಳು ಎಂದ ಮೇಲೆ ಆಡಳಿತದಲ್ಲಿ ಇರಲಿ, ಇಲ್ಲದಿರಲಿ. ಸಣ್ಣ ವಿಷಯಗಳೂ ಪ್ರಮುಖ ಎನಿಸಿ, ಆರೋಪ-ಪ್ರತ್ಯಾರೋಪಗಳ ಮೂಲಕ ಜನರಿಗೆ ಸುದ್ದಿ ಮುಟ್ಟುತ್ತವೆ. ಈಗ ಕಾಂಗ್ರೆಸ್‌ ಆಡಳಿತವಿದ್ದು, ಜೆಡಿಎಸ್‌ ಮುಖಂಡು ಜನವಿರೋಧಿ ಆಡಳಿತ ಎನ್ನುತ್ತಿದ್ದಾರೆ. ಸೊರಬ ಮುಖಂಡ ಕೆ.ಅಜ್ಜಪ್ಪ ಸಹ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳು ಕಳೆದರೂ ಯಾವುದೇ ಅಭಿವೃದ್ಧಿ ಕಾರ್ಯಗಳು ಅನುಷ್ಠಾನಕ್ಕೆ ಬಂದಿಲ್ಲ ಆರೋಪಿಸಿದ್ದಾರೆ.
ಅನೇಕರ ಶ್ರಮದಿಂದಾಗಿ ಹಿಂದುಗಳ ಶತಮಾನ ಕನಸು ಸಾಕಾರ
ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಇತಿಹಾಸ ಹಿಂದೆ ನೂರಾರು ಜನರ ತ್ಯಾಗ, ಬಲಿದಾನ, ಸಾವಿರಾರು ಹೋರಾಟಗಳ ರಕ್ತಚರಿತ್ರೆ ಇದೆ. ಅಲ್ಲದೇ, ಶ್ರೀ ರಾಮ ಮಂದಿರ ಕನಸು ನನಸಾಗಲಿ ಎಂಬ ಕಾರಣಕ್ಕೆ ಪುತ್ತಿಗೆ ಮಠದ ಶ್ರೀ ಸುಗುಣೇಂದ್ರ ತೀರ್ಥರು ಪ್ರಪಂಚದಾದ್ಯಂತ ಭಗವದ್ಗೀತೆಯ ಪ್ರಸಾರ ಮಾಡಿದರು. ಕೋಟಿ ಗೀತ ಲೇಖನ ಯಜ್ಞ ಆಂದೋಲನ ನಡೆಸುತ್ತಿದ್ದಾರೆ. ಹೀಗೆ ಅನೇಕರು ರಾಮ ಮಂದಿರದ ವಿಷಯದಲ್ಲಿ ತಮ್ಮದೇ ಆದ ಕೊಡುಗೆ ನೀಡಿದ್ದಾರೆ. ಇವರೆಲ್ಲರ ಶ್ರಮದಿಂದಾಗಿ ಇಂದು ಹಿಂದುಗಳ ಶತಮಾನದ ಕನಸು ಸಾಕಾರಗೊಳ್ಳುತ್ತಿದೆ ಎಂದು ಪುತ್ತಿಗೆ ಮಠದ ದಿವಾನರಾದ ಗೋಪಾಲಚಾರ್ ಹೇಳಿದ್ದಾರೆ.
ಇ-ಸ್ವತ್ತು ವಿಳಂಬ ಹಿನ್ನೆಲೆ ಪುರಸಭೆ ಬಳಿ ಪೆಟ್ರೋಲ್‌ ಸುರಿದುಕೊಂಡ ಯುವಕ!
ಸರ್ಕಾರಿ ಕೆಲಸ, ದೇವರ ಕೆಲಸ ಎಂಬ ಜನಪ್ರಿಯ ಮಾತೊಂದಿದೆ. ಆದರೆ, ಇದು ಅಧಿಕಾರಿ-ಸಿಬ್ಬಂದಿಗೆ ಗೊತ್ತಿದ್ದೂ, ಎಲ್ಲಿಯೂ ಕಡ್ಡಾಯವಾಗಿ ಜಾರಿಗೊಂಡಿಲ್ಲ ಅನ್ನೋದಕ್ಕೆ ಶಿಕಾರಿಪುರ ಪುರಸಭೆ ಬಳಿ ಯುವಕ ಮುನಿರತ್ನ ಎಂಬಾತ ಪೆಟ್ರೋಲ್‌ ಸುರಿದುಕೊಂಡು ಆತ್ಮಹತ್ಯೆಗೆ ಯತ್ನಿಸಿರುವುದು ಸಾಕ್ಷಿಯಾಗಿದೆ.
ನಾ.ಡಿಸೋಜರಿಂದ ಸಾರ್ವಕಾಲಿಕ ಗಟ್ಟಿತನದ ಸಾಹಿತ್ಯ ರಚನೆ
ಸಾಹಿತಿ, ಲೇಖಕ ತನ್ನ ದೇಶ, ಪರಿಸರದ ಸ್ಪಂದನೆ ಅಕ್ಷರ ಮೂಲಕ ಸ್ಪಂದಿಸುತ್ತಾನೆ. ಇಂಥ ಮಾತಿಗೆ ಸಾಗರದ ಹಿರಿಯ ಸಾಹಿತಿ ನಾ.ಡಿಸೋಜ ಸಾಧನೆ ಗಮನೀಯ. ದ್ವೀಪ ಕಾದಂಬರಿ ಮೂಲಕ ದೇಶದ ಗಮನ ಸೆಳೆದಿದ್ದ ಅವರು ಈಗ ಸಮಗ್ರ ಕಾದಂಬರಿಗಳ ಸಂಪುಟ ಆರು ಸಾವಿರ ಪುಟಗಳ ಕೃತಿ ಮೂಲಕ ಮತ್ತೆ ಸಾಹಿತ್ಯಪ್ರಿಯರ ಮನಸೆಳೆದಿದ್ದಾರೆ. ನಾಡೋಜ, ವಿದ್ವಾಂಸ ಡಾ.ಹಂಪ ನಾಗರಾಜಯ್ಯ ಅವರು ನಾ.ಡಿಸೋಜ ಸರ್ವಕಾಲಕ್ಕೂ ಸಲ್ಲುವ ಗಟ್ಟಿತನದ ಸಾಹಿತಿ ಎಂದು ಸಮಾರಂಭದಲ್ಲಿ ಹೇಳಿರುವುದು ಗಮನೀಯ.
  • < previous
  • 1
  • ...
  • 422
  • 423
  • 424
  • 425
  • 426
  • 427
  • 428
  • 429
  • 430
  • ...
  • 490
  • next >
Top Stories
ಚಿನ್ನವೋ, ಬೆಳ್ಳಿಯೋ? ಎಲ್ಲಿ ಹೂಡಿಕೆ ಮಾಡಿದರೆ ಬೆಸ್ಟ್‌!
ಕ್ರೈಸ್ತರ ಪಟ್ಟಿಯಲ್ಲಿ ಹಿಂದೂ ಧರ್ಮ ತೋರಿಸುವ ಯತ್ನ
''ಶಿಸ್ತು, ಜವಾಬ್ದಾರಿಯ ಮೂರ್ತರೂಪ ಮೋದಿ ಜೀ''
ವಿಷ್ಣು-ಅಂಬಿ ಇಬ್ಬರಿಗೂ ಒಟ್ಟಿಗೆ ಕರ್ನಾಟಕ ರತ್ನ ನೀಡಿ : ತಾರಾ
ಬಾನು ದಸರಾ ಉದ್ಘಾಟನೆ ಪ್ರಶ್ನಿಸಿದ್ದ ಅರ್ಜಿ ವಜಾ
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ಮನರಂಜನೆ
  • ವಿಶೇಷ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved