ಕೋಮು ಸಾಮರಸ್ಯ ಕದಡಿಸಿ ಗೆದ್ದ ಬಿಜೆಪಿ: ಗೀತಾ ವಾಗ್ಳೆಗ್ಯಾರಂಟಿ ಯೋಜನೆಗಳನ್ನೇ ಸರಿಯಾಗಿ ನೀಡಲಾಗದ ಸರ್ಕಾರ ಎಂಬುದಾಗಿ ಹೇಳಿರುವ ಮಹಿಳಾ ಮೋರ್ಚಾ ಅಧ್ಯಕ್ಷೆ ಸಂಧ್ಯಾ ರಮೇಶ್, ತಮ್ಮ ಪಕ್ಷದ ಮಹಿಳೆಯರನ್ನೇ ಮೊದಲು ವಿಚಾರಿಸಿ ಈ ಹೇಳಿಕೆ ನೀಡಬೇಕಿತ್ತು. ಅಧ್ಯಕ್ಷರೇ, ನಿಮ್ಮ ಪಕ್ಷದಲ್ಲೇ ಅದೆಷ್ಟೋ ಮಹಿಳೆಯರು ಗ್ಯಾರಂಟಿ ಯೋಜನೆಗಳ ಫಲಾನುಭವಿಗಳಾಗಿದ್ದು, ಅವರಲ್ಲಿ ಇವುಗಳ ಬಗ್ಗೆ ವಿಚಾರಿಸಿ ಕೊಳ್ಳುವುದು ಒಳಿತು ಎಂದು ಗೀತಾ ವಾಗ್ಳೆ ಕುಟುಕಿದ್ದಾರೆ.