ಮಣಿಪಾಲದಲ್ಲಿ ಉದ್ಭವ್ ಡಿಸೈನ್ ಸ್ಟುಡಿಯೋ ಕಾರ್ಯಾರಂಭ1992ರಲ್ಲಿ ಸುಸ್ಥಿರ ವಾಸ್ತುಶಿಲ್ಪದ ಪ್ರವರ್ತನೆಯ ಗುರಿಯೊಂದಿಗೆ ಬೆಂಗಳೂರಿನಲ್ಲಿ ಸ್ಥಾಪನೆಯಾದ ಉದ್ಭವ ಡಿಸೈನ್ ಸ್ಟುಡಿಯೋ ಇದೀಗ ಮಣಿಪಾಲಕ್ಕೆ ತನ್ನ ಅಸ್ತಿತ್ವವನ್ನು ವಿಸ್ತರಿಸಿದೆ. ಯುವ ಆರ್ಕಿಟೆಕ್ಟ್ ಆರ್. ಆಶ್ಲೇಷ್ ಶೆಟ್ಟಿ ನೇತೃತ್ವದಲ್ಲಿ, ಈ ಸಂಸ್ಥೆ ಪರಿಸರ ಸ್ನೇಹಿ ಮತ್ತು ಸುಸ್ಥಿರ ನಿರ್ಮಾಣಗಳ ಮೇಲೆ ಕೇಂದ್ರೀಕರಿಸಿದ್ದು, ಈಗಾಗಲೇ ವಸತಿ, ಸಾಂಸ್ಥಿಕ, ಆತಿಥ್ಯ ಮತ್ತು ವಾಣಿಜ್ಯ ಯೋಜನೆಗಳನ್ನು ವಿನ್ಯಾಸಗೊಳಿಸುವಲ್ಲಿ ಹೆಸರುವಾಸಿವಾಗಿದೆ.