ಉಡುಪಿ: ಬನ್ನಂಜೆ ಗೋವಿಂದಾಚಾರ್ಯರ ಕೃತಿಗಳ ಬಿಡುಗಡೆಕೀರ್ತಿಶೇಷ ವಿದ್ಯಾವಾಚಸ್ಪತಿ ಡಾ ಬನ್ನಂಜೆ ಗೋವಿಂದಾಚಾರ್ಯರ ಭಗವದ್ ಗೀತೆ (ಐದು ಮತ್ತು ಆರನೇ ಅಧ್ಯಾಯ, ಆಚಾರ್ಯತ್ರಯರ ಭಾಷ್ಯದ ವಿಶ್ಲೇಷಣೆಯ ಜತೆಗೆ) ಹಾಗೂ ಹಾಡುಗಬ್ಬಗಳು (ಆನಂದತೀರ್ಥರ ಭಕ್ತಿಗೀತೆಗಳು, ಹದಿನಾಲ್ಕು ಹಾಡುಗಳು, ಕೃಷ್ಣಮಾಲಾ, ಧ್ಯಾನಮಾಲ, ಶ್ರೀ ಜಯತೀರ್ಥ ಸ್ತುತಿ ಮತ್ತು ಶ್ರೀ ಪೂರ್ಣಬೋಧ ಸ್ತೋತ್ರ (ಶ್ರೀ ರಾಘವೇಂದ್ರ ಸ್ತುತಿ) ಪುಸ್ತಕವನ್ನು ಉಡುಪಿ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಪರ್ಯಾಯ ಉಭಯ ಶ್ರೀಪಾದರು ಬಿಡುಗಡೆಗೊಳಿಸಿದರು.