ಶಿರಸಿಯಲ್ಲಿ ಬೆಳೆವಿಮೆಗಾಗಿ ಬೀದಿಗಿಳಿದ ಅನ್ನದಾತರು, ತೋಟಗಾರಿಕಾ ಇಲಾಖೆಗೆ ಬೀಗ ಹಾಕಲು ಯತ್ನಕಳೆದ ಎರಡು ವರ್ಷದ ಹಿಂದೆ ಬೆಳೆವಿಮೆ ಕಡಿಮೆ ಹಾಕಿದ್ದರೂ ಸುಮ್ಮನಿದ್ದೆವು. ಈಗ ಕಂಪನಿಯಿಂದಾಗಿ ವಿಳಂಬವಾಗುತ್ತಿದ್ದು, ಈ ಹಣಕ್ಕೆ ನಮಗೆ ಬಡ್ಡಿ ನೀಡುತ್ತೀರಾ? ಯಾವ ಕಾರಣಕ್ಕೆ ತಡ ಆಗಿದೆ ಎಂಬ ಬಗ್ಗೆ ಸ್ಪಷ್ಟ ಉತ್ತರ ಬೇಕು. ಇಲ್ಲದಿದ್ದರೆ ಅಧಿಕಾರಿಗಳಿಗೆ ಮನೆಗೆ ಹೋಗಲು ಬಿಡುವುದಿಲ್ಲ ಎಂದು ರೈತರು ಆಕ್ರೋಶ ವ್ಯಕ್ತಪಡಿಸಿದರು.