ನಮ್ಮ ಜೀವನ ಅರ್ಥಪೂರ್ಣ ತೃಪ್ತಿಕರವಾಗಿರಲಿಕನ್ನಡಪ್ರಭ ವಾರ್ತೆ ವಿಜಯಪುರ ನಮ್ಮ ಹಿರಿಯರು ಹೇಳುವಂತೆ ಜೀವನ ಅರ್ಥಪೂರ್ಣವಾಗಿ, ಸದುದ್ದೇಶದೊಂದಿಗೆ, ತೃಪ್ತಿಕರ ಹಾಗೂ ಸಂಪೂರ್ಣವಾಗಿರಬೇಕು ಎಂದು ವೈದ್ಯ ಡಾ.ಪ್ರಶಾಂತ ಕಟಕೋಳ ಹೇಳಿದರು. ನಗರದ ಜ್ಞಾನಯೋಗಾಶ್ರಮದಲ್ಲಿ ನಡೆಯುತ್ತಿರುವ ಶ್ರೀ ಸಿದ್ದೇಶ್ವರ ಸ್ವಾಮೀಜಿಗಳ ಗುರುನಮನ ಮಹೋತ್ಸವದಲ್ಲಿ ನಾಲ್ಕನೇ ಗೋಷ್ಠಿ ಯೋಗ ಜೀವನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.