ಇಂದಿರಾ ಗಾಂಧಿ ಗೌರವಾರ್ಥ ಕ್ಯಾಂಟೀನ್ ಸ್ಥಾಪನೆಕನ್ನಡಪ್ರಭ ವಾರ್ತೆ ವಿಜಯಪುರ ಬಡವರ ಬಗ್ಗೆ ಮಾಜಿ ಪ್ರಧಾನಿ ಇಂದಿರಾ ಗಾಂಧಿಯವರು ಹೊಂದಿದ್ದ ಕಳಕಳಿ, ಬಡತನ ನಿರ್ಮೂಲನೆಗಾಗಿ ಅವರು ರೂಪಿಸಿದ್ದ ಗರೀಬಿ ಹಠಾವೋ, ರೋಟಿ, ಕಪಡಾ ಔರ್ ಮಕಾನ್ ಯೋಜನೆಗಳು ಇಂದಿಗೂ ಇತರರಿಗೆ ಮಾದರಿಯಾಗಿವೆ. ಹೀಗಾಗಿ ಅವರ ಗೌರವಾರ್ಥ ರಾಜ್ಯ ಈ ಕ್ಯಾಂಟೀನ್ಗಳಿಗೆ ಇಂದಿರಾ ಕ್ಯಾಂಟೀನ್ ಎಂದು ಹೆಸರಿಟ್ಟಿದೆ ಎಂದು ಉಸ್ತುವಾರಿ ಸಚಿವ ಡಾ.ಎಂ.ಬಿ. ಪಾಟೀಲ ಹೇಳಿದರು.