24 ಗಂಟೆಯಲ್ಲೇ ಟಿಸಿ ಬದಲಿಸಲು ಯೋಜನೆಕನ್ನಡಪ್ರಭ ವಾರ್ತೆ ಬೀಳಗಿ ರೈತರ ಜಮೀನುಗಳಲ್ಲಿನ ಪಂಪ್ಸೆಟ್, ಕೊಳವೆ ಭಾವಿ ಪಂಪ್ಸೆಟ್ಗಳಿಗೆ ಸರಿಯಾದ ಪ್ರಮಾಣದಲ್ಲಿ ವಿದ್ಯುತ್ ಸರಬರಾಜು ಆಗದೆ ಪಂಪ್ಸೆಟ್ ಹಾಳಾಗಿ ರೈತರಿಗೆ ತುಂಬಾ ಹಾನಿಯಾಗಿದೆ. ಸರಿಯಾದ ವಿದ್ಯುತ್ ಪೂರೈಕೆ ಆಗಬೇಕು ಎನ್ನುವ ಉದ್ದೇಶದಿಂದ ಉಪಕೇಂದ್ರ ಆರಂಭಿಸಿ ರೈತರಿಗೆ ಅನುಕೂಲ ಮಾಡುವ ಉದ್ದೇಶದಿಂದ ಇಂತಹ ವಿದ್ಯುತ್ ಉಪಕೇಂದ್ರ ಸ್ಥಾಪಿಸಲಾಗಿದೆ ಎಂದು ಶಾಸಕ ಹಾಗೂ ಹಟ್ಟಿ ಚಿನ್ನದ ಗಣಿ ನಿಗಮದ ಅಧ್ಯಕ್ಷ ಜೆ.ಟಿ.ಪಾಟೀಲ ಹೇಳಿದರು.