ಅರಸೀಕೆರೆಯ ಭ್ರಷ್ಟಾಚಾರಗಳಿಗೆ ಶಾಸಕ ಶಿವಲಿಂಗೇಗೌಡರೇ ಹೊಣೆ

Aug 29 2025, 01:00 AM IST
corruptionಮೂಲತಃ ಗುತ್ತಿಗೆದಾರರಾಗಿ ಇಂದು ಸಂಪುಟದರ್ಜೆ ಅಧಿಕಾರದಲ್ಲಿರುವ ಅರಸೀಕೆರೆ ಕ್ಷೇತ್ರದ ಶಾಸಕರಾದ ಕೆ.ಎಂ.ಶಿವಲಿಂಗೇಗೌಡರು ತಾಲೂಕಿನಲ್ಲಿ ಅಧಿಕಾರಿಗಳನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡು ಭಾರೀ ಭ್ರಷ್ಟಾಚಾರ ಮಾಡಿದ್ದಾರೆ. ಅದಕ್ಕೆ ಸಂಬಂಧಪಟ್ಟ ದಾಖಲೆಗಳೂ ನನ್ನ ಬಳಿ ಇದ್ದು, ಅರಸೀಕೆರೆಯಿಂದ ಜಿ ಪಂ ಕಛೇರಿವರೆಗೂ ಪಾದಯಾತ್ರೆ ನಡೆಸುವುದಾಗಿ ಜೆಡಿಎಸ್ ಮುಖಂಡ ಎನ್.ಆರ್. ಸಂತೋಷ್ ಎಚ್ಚರಿಸಿದರು. ತಮಗೆ ಬೇಕಾದವರನ್ನು ಬೇಕಾದಲ್ಲಿಗೆ ನೇಮಕ ಮಾಡಿಕೊಂಡು ಹಣ‌ ವಸೂಲಿ‌ ಮಾಡಿದ್ದಾರೆ. ಮುಂದಿನ ತಾಲೂಕು ಪಂಚಾಯ್ತಿ ಹಾಗೂ ಜಿಲ್ಲಾ ಪಂಚಾಯ್ತಿ ಚುನಾವಣೆಯನ್ನು ಮುಂದಿಟ್ಟುಕೊಂಡು ಈ ಮೂಲಕ ಹಣ ಕ್ರೂಢೀಕರಣ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.