ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಬೀಳ್ಕೊಡುಗೆ ಸಮಾರಂಭ

Mar 11 2025, 12:46 AM IST
ದೈಹಿಕ ಆಕರ್ಷಣೆಯಿಂದ ವಿದ್ಯಾರ್ಥಿಗಳು ವಿಚಲಿತರಾಗದೇ ಅನ್ಯ ವಿಚಾರಗಳಿಂದ ದೂರವಿದ್ದು ಮುಂಬರುವ ಎಸ್ಸೆಸ್ಸೆಲ್ಸಿ ವಾರ್ಷಿಕ ಪರೀಕ್ಷೆಯಲ್ಲಿ ಅತ್ಯುತ್ತಮ ಅಂಕಗಳನ್ನು ಪಡೆಯಲು ಶ್ರಮವಹಿಸಬೇಕು ಎಂದು ಅನುಗ್ರಹ ಆಂಗ್ಲ ಮಾಧ್ಯಮ ಪ್ರೌಢಶಾಲಾ ವ್ಯವಸ್ಥಾಪಕ ಫಾ.ಕಿರಣ್ ಮೆಲ್ವಿನ್ ಹೇಳಿದರು. ವಿದ್ಯಾರ್ಥಿ ಜೀವನದಲ್ಲಿ ಅಂಕಗಳು ಕಲಿಕೆಯ ಮಾನದಂಡವಾದ್ದರಿಂದ ಕಲಿಕೆಯಲ್ಲಿ ಏರುಪೇರಾದರೆ ಯಾವುದೇ ದುಡುಕಿನ ನಿರ್ಧಾರವನ್ನು ತೆಗೆದುಕೊಳ್ಳಬಾರದು. ಉತ್ತಮ ಕಲಿಕೆಗೆ ನಿಸ್ವಾರ್ಥ ಸೇವೆ ಸಲ್ಲಿಸಿದ ಶಿಕ್ಷಕರನ್ನು, ಶಾಲೆಯನ್ನು ಹಾಗೂ ತಂದೆ ತಾಯಿಯರನ್ನು ಗೌರವಿಸಬೇಕಾಗಿರುವುದು ವಿದ್ಯಾರ್ಥಿಗಳ ಆದ್ಯ ಕರ್ತವ್ಯ. ಮಾನವ ಧರ್ಮದ ತತ್ವದ ಆಧಾರದ ಮೇಲೆ ನಾವೆಲ್ಲ ಬದುಕಿ ಬಾಳಬೇಕು ಎಂದರು.