ಹಾಸನಾಂಬೆ ದರ್ಶನ ಮುಗಿಸಿ ಹೋಗುವಾಗ ಅಪಘಾತದಲ್ಲಿ ತಂದೆ ಮಗಳು ಸಾವು
Nov 02 2024, 01:22 AM ISTಹಾಸನಾಂಬೆ ದರ್ಶನ ಮುಗಿಸಿಕೊಂಡು ರಸ್ತೆಬದಿ ನಡೆದುಕೊಂಡು ಹೋಗುತ್ತಿದ್ದವರಿಗೆ ಹಿಂದಿನಿಂದ ಬೊಲೇರೋ ವಾಹನ ಡಿಕ್ಕಿ ಹೊಡೆದ ಪರಿಣಾಮ ತಂದೆ ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ನಗರದ ಶ್ರೀ ಧರ್ಮಸ್ಥಳ ಮಂಜುನಾಥ ಆಯುರ್ವೇದ ಆಸ್ಪತ್ರೆ ಸಮೀಪ ಗುರುವಾರ ನಡುರಾತ್ರಿ ನಡೆದಿದೆ. ಆಲೂರು ತಾಲೂಕಿನ ಪಾಳ್ಯ ಸಮೀಪದ ಎಂ.ಎಚ್.ಪುರದ ನಿವಾಸಿ ಕುಮಾರ್(40) ಹಾಗೂ ಕಾವ್ಯ(12) ಸ್ಥಳದಲ್ಲೇ ಮೃತಪಟ್ಟಿದ್ದು, ಕುಮಾರ್ ಅವರ ತಾಯಿ ಪುಟ್ಟಮ್ಮ ಗಂಭೀರವಾಗಿ ಗಾಯಗೊಂಡಿದ್ದಾರೆ.