ಕಾಫಿ ಬೆಳೆ ತುಳಿದು ಹಾಳು ಮಾಡಿದ ಕಾಡಾನೆಗಳು

Sep 03 2024, 01:39 AM IST
ಕಡೇಗರ್ಜೆ ಬಳಿಯ ಗುಡ್‌ಬೆಟ್ಟ ಎಸ್ಟೇಟ್ - ಬಾಳೇಗದ್ದೆ ವ್ಯಾಪ್ತಿಗೊಳಪಡುವ ಹಲವಾರು ಜಮೀನುಗಳಿಗೆ ಲಗ್ಗೆಯಿಟ್ಟ ಕಾಡಾನೆಗಳ ಗುಂಪು ಲಕ್ಷಾಂತರ ಮೌಲ್ಯದ ಅಡಿಕೆ, ಕಾಫಿ, ಬಾಳೆ ತುಳಿದು ಹಾಳುಮಾಡಿವೆ. ಕಳೆದ ಹದಿನೈದು ದಿನಗಳಿಂದ ಬೀಡುಬಿಟ್ಟಿರುವ ಕಾಡಾನೆಗಳಿಂದ ಅಡಿಕೆ, ಕಾಫಿ ನಾಶವಾಗಿದೆ. ಗುಡ್ಬೆಟ್ಟ ಎಸ್ಟೇಟ್ ೪೦೦ ಎಕರೆ, ಬಾಳೆಗದ್ದೆ ಎಸ್ಟೇಟ್ ೨೦೦ ಎಕರೆ, ಪಕ್ಕದ ಮುತ್ತಣ್ಣನ ಕಾಡು ೩ ಎಕರೆಯ ಪ್ರದೇಶಗಳು ಆನೆಗಳು ವಿಶ್ರಾಂತಿ ಪಡೆಯುವ ಪ್ರಮುಖ ಸ್ಥಳಗಳಾಗಿದೆ. ಈ ಮೂಲಕ ಅಕ್ಕಪಕ್ಕದ ಸಣ್ಣಪುಟ್ಟ ರೈತರ ಜಮೀನಿಗೆ ಕಾಡಾನೆಗಳು ರಾತ್ರಿ ವೇಳೆ ಬಂದು ಬೆಳೆ ನಾಶ ಮಾಡುತ್ತಿರುವುದು ಸಾಮಾನ್ಯವಾಗಿದೆ. ಮಾಧ್ಯಮಗಳು ರೈತನ ಸಮಸ್ಯೆಗಳನ್ನು ಬಿತ್ತರಿಸುವುದರ ಮೂಲಕ ಸರ್ಕಾರದ ಗಮನ ಸೆಳೆದು ಬಡ ರೈತನ ಪರವಾಗಿ ನಿಲ್ಲಬೇಕಾದ ಅನಿವಾರ್ಯತೆಯಿದೆ.