ಸಮುದಾಯಗಳ ಮಧ್ಯೆ ಸೇತುವೆ ಕಟ್ಟುತ್ತಿದ್ದೇನೆ
Jun 12 2025, 03:47 AM ISTಹಿಂದೂಗಳು, ಮುಸ್ಲಿಮರು, ಕ್ರಿಶ್ಚಿಯನ್ನು ಸೇರಿದಂತೆ ಎಲ್ಲರಲ್ಲೂ ಸಮಸ್ಯೆ ಇದೆ. ನನ್ನ ಪಾತ್ರಗಳು ಮುಸ್ಲಿಂ ಆಗಿದ್ದರಿಂದ, ಅದು ಆ ಸಮುದಾಯದ್ದಷ್ಟೇ ಸಮಸ್ಯೆ ಆಗುವುದಿಲ್ಲ. ಸಮಸ್ಯೆಯ ಪ್ರತಿನಿಧಿಯಷ್ಟೆ. ಸಮಸ್ಯೆ ಸಾರ್ವತ್ರಿಕ ಆಗಿದ್ದರಿಂದಲೇ ನನ್ನ ಕೃತಿಗೆ ಬೂಕರ್ ಪ್ರಶಸ್ತಿ ಬರಲು ಸಾಧ್ಯವಾಯಿತು ಎಂದು ಲೇಖಕಿ ಬಾನು ಮುಷ್ತಾಕ್ ಹೇಳಿದರು. ಮುಸ್ಲಿಂ ಸಮುದಾಯದವರನ್ನು ಅನ್ಯರಾಗಿ ಮಾಡುವ ಮೂಲಕ ಕೆಲವರು ರಾಜಕೀಯ ಲಾಭ ಪಡೆಯಲು ಪ್ರಯತ್ನಿಸುತ್ತಿದ್ದಾರೆ. ನಾವು ಹೊರಗಿನಿಂದ ಬಂದವರಲ್ಲ, ನಾವು ಇಲ್ಲಿಯವರೇ. ಮುಸ್ಲಿಂ ಸಮುದಾಯದವರು ಇದನ್ನು ಅರ್ಥ ಮಾಡಿಕೊಳ್ಳಬೇಕು ಎಂದರು.