ಕೆ.ಎಂ.ದೊಡ್ಡಿ: ದುಷ್ಕರ್ಮಿಗಳಿಂದ ವ್ಯಕ್ತಿ ಕುತ್ತಿಗೆಗೆ ಚಾಕು ಹಾಕಿ ಹತ್ಯೆಗೈದು ಪರಾರಿ..!ವ್ಯಕ್ತಿ ಕುತ್ತಿಗೆಗೆ ಚಾಕು ಹಾಕಿ ಹತ್ಯೆ ಮಾಡಿರುವ ಘಟನೆ ಸಮೀಪದ ಲಕ್ಷ್ಮೇಗೌಡನದೊಡ್ಡಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ಮುಂಜಾನೆ ಜರುಗಿದೆ. ಗ್ರಾಮದ ಕೃಷ್ಣೇಗೌಡ ಮೃತ ವ್ಯಕ್ತಿ. ಮನೆಯಿಂದ ಎಮ್ಮೆ ಕರು ಹಿಡಿದುಕೊಂಡು ತೋಟದ ಬಳಿ (ಮದನಹಟ್ಟಮ್ಮ ದೇವಾಲಯದ ಸಮೀಪ) ಕಟ್ಟಲು ತೆರಳುತ್ತಿದ್ದಾಗ ದುಷ್ಕರ್ಮಿಗಳು ಆತನ ಕುತ್ತಿಗೆ ಸೀಳಿ ಕೊಲೆ ಮಾಡಿ ಪರಾರಿ.