ಅಯೋಧ್ಯೆಯಲ್ಲಿ ನಿರ್ಮಾಣವಾಗಿರುವ ಐತಿಹಾಸಿಕ, ಭವ್ಯ ರಾಮಮಂದಿರದಲ್ಲಿ ಸೋಮವಾರ ಬಾಲರಾಮ ವಿಗ್ರಹದ ಪ್ರಾಣ ಪ್ರತಿಷ್ಠಾಪನೆ ಬಳಿಕ ದೇಗುಲದ ಹೊರಭಾಗದಲ್ಲಿ ನೆರೆದಿದ್ದ ಸಹಸ್ರಾರು ಗಣ್ಯರನ್ನು ಉದ್ದೇಶಿಸಿ 36 ನಿಮಿಷ ಪ್ರಧಾನಿ ಮಾತನಾಡಿದರು.
500 ವರ್ಷಗಳ ಭಾರತೀಯರ ಕನಸು ಈಡೇರಿದ್ದು, ಮಂದಿರ ಉದ್ಘಾಟನೆಯ ಜತೆಗೆ 5 ವರ್ಷದ ಹಸನ್ಮುಖಿ ಬಾಲರಾಮನ ಪ್ರತಿಷ್ಠಾಪನೆ ಪ್ರಧಾನಿ ನರೇಂದ್ರ ಮೋದಿ ಅವರ ಅಮೃತ ಹಸ್ತದಿಂದ ಸೋಮವಾರ ಮಧ್ಯಾಹ್ನ 12.30ರ ಶುಭ ಮುಹೂರ್ತದಲ್ಲಿ ನಿರ್ವಿಘ್ನವಾಗಿ ನೆರವೇರಿದೆ.