ಸನ್ಯಾಸಿಗಳು ದೇಶವನ್ನು ಟೀಕಿಸುವುದು ಸರಿಯಲ್ಲವಿವಿಧತೆಯಲ್ಲೂ ಏಕತೆಯ ಬದುಕು ನೀಡುತ್ತಿರುವ ವೈಭವಶಾಲಿ, ಶ್ರೀಮಂತ ಸಾಮರಸ್ಯದ ವ್ಯವಸ್ಥೆ ಹೊಂದಿರುವ ಭಾರತದ ಬಗ್ಗೆ ಪ್ರಗತಿಪರರೆಂಬ ಸೋಗಿನ ಜನರೊಡನೆ ನಮ್ಮ ಸನ್ಯಾಸಿಗಳೂ ಸೇರಿಕೊಂಡು ಟೀಕಿಸುತ್ತಿರುವುದು ಸಮರ್ಥನೀಯವಲ್ಲ ಎಂದು ಬನಹಟ್ಟಿ ನಗರದ ಶ್ರೀಕಾಡಸಿದ್ಧೇಶ್ವರ ದೇವಸ್ಥಾನದ ಕಳಸಾರೋಹಣ ಹಾಗೂ ಲಕ್ಷ ದೀಪೋತ್ಸವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಕನೇರಿಯ ಅದೃಶ್ಯ ಮಠದ ಕಾಡಸಿದ್ಧೇಶ್ವರ ಶ್ರೀ ಹೇಳಿದರು.