ಹಿಂದು ಧರ್ಮ ರಕ್ಷಣೆಗಾಗಿ ವಿಹಿಂಪ ಸ್ಥಾಪನೆಕನ್ನಡಪ್ರಭ ವಾರ್ತೆ ಚಿಕ್ಕೋಡಿ ಹಿಂದು ಧರ್ಮದ ರಕ್ಷಣೆ ಹಾಗೂ ಸಂವರ್ಧನೆಗಾಗಿ ವಿಶ್ವ ಹಿಂದು ಪರಿಷತ್ನ್ನು 60 ವರ್ಷಗಳ ಹಿಂದೆ ಸ್ಥಾಪಿಸಿದ್ದಾಗಿ ಕನ್ಹೇರಿ, ಕೊಲ್ಲಾಪೂರ ಜಗದ್ಗುರು ಸಿದ್ಧಸಂಸ್ಥಾನ ಮಠದ ಅದೃಶ್ಯ ಕಾಡಸಿದ್ದೇಶ್ವರ ಶ್ರೀ ಹೇಳಿದರು. ಚಿಕ್ಕೋಡಿ ತಾಲೂಕಿನ ತೋರನಹಳ್ಳಿ ಗ್ರಾಮದಲ್ಲಿ ವಿಶ್ವ ಹಿಂದು ಪರಿಷತ್ ಚಿಕ್ಕೋಡಿ ಜಿಲ್ಲೆ ಆಯೋಜಿಸಿದ್ದ ಶಷ್ಠಾಬ್ದಿ ಧರ್ಮಾಚಾರ್ಯ ಸಂಪರ್ಕವಿಭಾಗ, ಮಠ ಮಂದಿರ, ವಯಂ ಅರ್ಚಕ ಪುರೋಹಿತ ಸಂಪರ್ಕ ಆಯಾಮ ಗೋರಕ್ಷಾ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿರು.