• ಭಾರತ
  • ಪ್ರಪಂಚ
  • ವಿಶೇಷ
  • ರಾಜಕೀಯ
  • ಮನರಂಜನೆ
  • ಅಪರಾಧ
  • ಕ್ರೀಡೆ
  • ಕರ್ನಾಟಕ
  • ಇ- ಪೇಪರ್
  • Home
  • karnataka-news
  • chitradurga

chitradurga

ಫೀಚರ್ಡ್‌ವಿಜಯನಗರಚಿಕ್ಕಬಳ್ಳಾಪುರಚಿತ್ರದುರ್ಗಮೈಸೂರು
ತುಮಕೂರುವಿಜಯಪುರಗದಗ ದಾವಣಗೆರೆಉತ್ತರ-ಕನ್ನಡಬಾಗಲಕೋಟೆಶಿವಮೊಗ್ಗಚಾಮರಾಜನಗರದಕ್ಷಿಣ ಕನ್ನಡಮಂಡ್ಯಕೊಪ್ಪಳಹಾವೇರಿಯಾದಗಿರಿಬೆಂಗಳೂರುಬೆಳಗಾವಿಚಿಕ್ಕಮಗಳೂರುಬೀದರ್ಉಡುಪಿರಾಯಚೂರುರಾಮನಗರಕೊಡಗುಧಾರವಾಡಕಲಬುರಗಿಕೋಲಾರಬಳ್ಳಾರಿಹಾಸನ
ಕೋಟೆನಾಡಿನಲ್ಲಿ ಮುಂದುವರಿದ ವರುಣನ ಆರ್ಭಟ
ಜಿಲ್ಲೆಯಾದ್ಯಂತ ಕಳೆದ ಒಂದು ವಾರದಿಂದ ಬೀಳುತ್ತಿದ್ದ ಮಳೆ ಮಂಗಳವಾರ ರಾತ್ರಿ ತುಸು ಜೋರಾಗಿಯೇ ಅಬ್ಬರಿಸಿದೆ. ಕಾತ್ರಾಳು , ಮನೆಮೈನಹಟ್ಟಿ, ಚಂದ್ರವಳ್ಳಿ ಕೆರೆಗಳು ಭರ್ತಿಯಾಗಿವೆ. ಐತಿಹಾಸಿಕ ಸಂತೆ ಹೊಂಡ ತುಂಬಿ ತುಳುಕಾಡುತ್ತಿದೆ.
ಹದಿ ಹರೆಯದ ಮಕ್ಕಳ ಮನಸ್ಥಿತಿ ಅತೀ ಸೂಕ್ಷ್ಮ
ಪೋಷಕರು ಮಕ್ಕಳಿಗಾಗಿ ಸಮಯವನ್ನು ಮೀಸಲಿರಿಸಬೇಕು. ಪ್ರೀತಿಯಿಂದ ಅವರೊಡನೆ ವ್ಯವಹರಿಸುವ ಮೂಲಕ ಮಕ್ಕಳ ಉಜ್ವಲ ಭವಿಷ್ಯಕ್ಕಾಗಿ ಶ್ರಮಿಸಬೇಕು ಎಂದು ಜಿಲ್ಲಾ ಮಹಿಳಾ ಸಬಲೀಕರಣ ಘಟಕದ ಡಿ. ಗೀತಾ ಹೇಳಿದರು.
ಹೊಸದುರ್ಗ ಪುರಸಭೆ ಬಹುತೇಕ ಬಿಜೆಪಿ ತೆಕ್ಕೆಗೆ
ಹೊಸದುರ್ಗ ಪುರಸಭೆಯ ಅಧ್ಯಕ್ಷ - ಉಪಾಧ್ಯಕ್ಷ ಆಯ್ಕೆ ಸಂಬಂಧ ಇಂದು ( ಆ.21) ಚುನಾವಣೆ ನಡೆಯಲಿದ್ದು ಅಧ್ಯಕ್ಷ - ಉಪಾಧ್ಯಕ್ಷ ಸ್ಥಾನ ಬಹುತೇಕ ಬಿಜೆಪಿಯ ತೆಕ್ಕೆಗೆ ಬೀಳಲಿದೆ. ಅಧ್ಯಕ್ಷ ಸ್ಥಾನ ಪರಿಶಿಷ್ಟ ಪಂಗಡಕ್ಕೆ ಹಾಗೂ ಉಪಾಧ್ಯಕ್ಷ ಸ್ಥಾನ ಬಿಸಿಎಂ (ಎ) ಮಹಿಳೆಗೆ ಮೀಸಲಾಗಿದೆ. ಪರಿಶಿಷ್ಟ ಪಂಗಡಕ್ಕೆ ಮೀಸಲಾಗಿರುವ ಅಧ್ಯಕ್ಷ ಸ್ಥಾನಕ್ಕೆ 18 ನೇ ವಾರ್ಡನ ಮೀಸಲು ಕ್ಷೇತ್ರದಿಂದ ಕಾಂಗ್ರೆಸ್ ಪಕ್ಷದಿಂದ ಆಯ್ಕೆಯಾಗಿರುವ ಶಂಕರಪ್ಪ, 19ನೇ ವಾಡ್ನ ಮೀಸಲು ಕ್ಷೇತ್ರದಿಂದ ಬಿಜೆಪಿಯಿಂದ ಆಯ್ಕೆಯಾಗಿರುವ ರಾಜೇಶ್ವರಿ ಅನಂದ್, ಬಿಸಿಎಂ (ಎ) ಮಹಿಳೆಗೆ ಮೀಸಲಾಗಿರುವ ಉಪಾಧ್ಯಕ್ಷ ಸ್ಥಾನಕ್ಕೆ ಕಾಂಗ್ರೆಸ್‌ನ ಸದಸ್ಯೆ ತಹೀರಾ ಬಾನು, ಬಿಜೆಪಿಯ ಜ್ಯೋತಿ ಕೆಂಚಪ್ಪ ಅರ್ಹರಾಗಿದ್ದಾರೆ.
ವಿವಿ ಪುರ ವ್ಯಾಪ್ತಿಯ ಕೆರೆಗಳಿಗೆ ನೀರು ಹರಿಸಲು ಆಗ್ರಹ
ತಾಲೂಕಿನ ವಿವಿಪುರ ವ್ಯಾಪ್ತಿಯ ಕೆರೆಗಳಿಗೆ ನೀರು ತುಂಬಿಸಲು ಆಗ್ರಹಿಸಿ ಬುಧವಾರ ರೈತ ಸಂಘ ಹಾಗೂ ಹಸಿರುಸೇನೆ ವತಿಯಿಂದ ವಿವಿಪುರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಮುಖಾಂತರ ಸರ್ಕಾರಕ್ಕೆ ಮನವಿ ಪತ್ರ ಸಲ್ಲಿಸಲಾಯಿತು.
ನಾಪತ್ತೆಯಾಗಿದ್ದ ಹೊಳಲ್ಕೆರೆ ವಿದ್ಯಾರ್ಥಿಗಳು ಬೆಂಗಳೂರಿನಲ್ಲಿ ಪತ್ತೆ
ಬುಧವಾರ ಮುಂಜಾನೆ ನಾಪತ್ತೆಯಾಗಿದ್ದ ಹೊಳಲ್ಕೆರೆಯ ಡ್ರೀಮ್ ವರ್ಲ್ಡ್ ಇಂಟರ್ ನ್ಯಾಷನಲ್ ಸ್ಕೂಲ್ ನ 10 ನೇ ತರಗತಿ ಓದುತ್ತಿದ್ದ ಆರು ಮಂದಿ ವಿದ್ಯಾರ್ಥಿಗಳು ಸಂಜೆ ಬೆಂಗಳೂರಿನಲ್ಲಿ ಪತ್ತೆಯಾಗಿದ್ದು ಪೋಷಕರ ಆತಂಕ ನಿವಾರಣೆಯಾಗಿದೆ.
ವೃದ್ದಾಪ್ಯ ವೇತನ ಪಡೆಯಲು ಬಿಸಿಲಿನಲ್ಲಿ ನಿಂತ ವೃದ್ದರು
ಚಳ್ಳಕೆರೆ ನಗರದಾದ್ಯಂತ ವೃದ್ದಾಪ್ಯ, ವಿಧವವೇತನ ಸೇರಿದಂತೆ ಸರ್ಕಾರದಿಂದ ಬರುವ ಮಾಸಾಶನವನ್ನು ತ್ಯಾಗರಾಜ ನಗರದಲ್ಲಿರುವ ಪ್ರಧಾನ ಅಂಚೆ ಕಚೇರಿಯಲ್ಲಿ ಪ್ರತಿ ತಿಂಗಳು ವಿತರಣೆ ಮಾಡಲಾಗುತ್ತಿತ್ತು. ನಗರದ ವಿವಿಧೆಡೆಗಳಿಂದ ಬಂದ ವಯೋವೃದ್ದರಿಗೆ ಅಂಚೆ ಕಚೇರಿಯ ಒಳಗೆ ಪ್ರವೇಶಿಸಿ ತಮ್ಮ ಹಣವನ್ನು ಪಡೆಯುವ ವ್ಯವಸ್ಥೆ ಮಾಡಲಾಗಿತ್ತು.
ವಿಶ್ವ ಸೊಳ್ಳೆ ದಿನವೆಂದರೆ ಹಬ್ಬದಂತೆ ಆಚರಿಸುವ ಸಂಭ್ರಮವಲ್ಲ
ಸೊಳ್ಳೆ ತಾಣಗಳ ನಾಶ ಮಾಡುವುದು ವಿದ್ಯಾರ್ಥಿಗಳ ಮುಖ್ಯ ಗುರಿಯಾಗಬೇಕು ಎಂದು ತಾಲೂಕು ಆರೋಗ್ಯಾಧಿಕಾರಿ ಡಾ. ಬಿ.ವಿ ಗಿರೀಶ್ ಹೇಳಿದರು. ನಗರದ ಬಾಲಕರ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ ಮಂಗಳವಾರ ಶಿಕ್ಷಣ ಇಲಾಖೆ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಹಮ್ಮಿಕೊಂಡಿದ್ದ ವಿಶ್ವ ಸೊಳ್ಳೆ ದಿನದಲ್ಲಿ ಮಾತನಾಡಿದ ಅವರು, ವಿಶ್ವ ಸೊಳ್ಳೆ ದಿನವೆಂದರೆ ಹಬ್ಬದಂತೆ ಆಚರಿಸುವ ಸಂಭ್ರಮವಲ್ಲ. ಇದು ಕೀಟಜನ್ಯ ರೋಗಗಳ ಮಾಹಿತಿ ನೀಡುವ ಮೂಲಕ ಜಾಗೃತಿ ಮೂಡಿಸುವ ಕಾರ್ಯಕ್ರಮವಾಗಿದೆ ಎಂದರು.
ಸಚಿವ ಸುಧಾಕರ್ ಸೂಚನೆ ನಂತರ ಡಿಸಿ ಓಬಣ್ಣನಹಳ್ಳಿಗೆ ಭೇಟಿ
ಮಳೆಯಿಂದ ಹಾನಿಗೊಳಗಾದ ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿಗೆ ಬುಧವಾರ ಮಧ್ಯಾಹ್ನ ಜಿಲ್ಲಾಧಿಕಾರಿ ಟಿ. ವೆಂಕಟೇಶ್ ಭೇಟಿ ನೀಡಿ ಪರಿಶೀಲಿಸಿದರು. ಸೂಕ್ತ ಪರಿಹಾರ ಕಾರ್ಯಗಳನ್ನು ತ್ವರಿತವಾಗಿ ಕೈಗೊಳ್ಳುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅರಸುರವರು ರಾಜ್ಯ ಕಂಡ ಶ್ರೇಷ್ಠ ಸಮಾಜ ಸುಧಾರಕರು
ಬಡವರ ಮತ್ತು ತುಳಿತಕ್ಕೊಳಗಾದವರ ಧ್ವನಿಯಾಗಿ ದೇವರಾಜ ಅರಸರು ಕೆಲಸ ಮಾಡಿದರು ಎಂದು ತಹಸೀಲ್ದಾರ್ ರಾಜೇಶ್ ಕುಮಾರ್ ಅಭಿಪ್ರಾಯಪಟ್ಟರು. ನಗರದ ಡಿ. ದೇವರಾಜ ಅರಸು ಹಿಂದುಳಿದ ವರ್ಗಗಳ ಮೆಟ್ರಿಕ್ ನಂತರದ ಬಾಲಕಿಯರ ವಿದ್ಯಾರ್ಥಿ ನಿಲಯದಲ್ಲಿ ತಾಲೂಕು ಆಡಳಿತ, ನಗರಸಭೆ, ತಾಲೂಕು ಪಂಚಾಯ್ತಿ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ ಅರಸುರವರ 109 ನೇ ಜನ್ಮದಿನಾಚರಣೆ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಡಿಸಿ ಕಚೇರಿ ಮುಂಭಾಗ ಓಬಣ್ಣನಹಳ್ಳಿ ಜನರ ಆರ್ತನಾದ
"ಡಿಸಿ, ಎಂಎಲ್ ಎ ನಮ್ಮನ್ನು ಮನುಷ್ಯರು ಅಂತ ಅಂದ್ಕಂಡಿಲ್ಲವೇನೋ, ಮಳೆ, ಚಳಿ ಗಾಳಿ ಲೆಕ್ಕಿಸದೇ ಬದುಕುತ್ತಿದ್ದೇವೆ. ಊರು ಮುಳುಗಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸ್ಕೂಲ್, ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದೇವೆ. ನಮ್ಮ ಕಷ್ಟ ಕೇಳೋಕೆ ಯಾಕೆ ಬಂದಿಲ್ಲ ಅಂತ ಅವರನ್ನೇ ಕೇಳಿ ಹೋಗೋಕೆ ದುರ್ಗಕ್ಕೆ ಬಂದಿದ್ದೇವೆ ". ಇವು ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿ ಗ್ರಾಮದ ಮಹಿಳೆಯರ ನೋವಿನ ನುಡಿಗಳು. ಮಳೆ ಬಂದು ಬದುಕು ಮುಳುಗಿ ಮೂರು ದಿನವಾಯ್ತು. ತಹಸಿಲ್ದಾರ್ ಕಾಟಾಚಾರಕ್ಕೆ ಭೇಟಿ ನೀಡಿ ಹೋದವರು ಮತ್ತೆ ಬಂದೇ ಇಲ್ಲ. ಭೋವಿ ಸ್ವಾಮೀಜಿ ಪ್ರತಿ ಮನೆಗಳಿಗೆ ಭೇಟಿ ನೀಡಿ ನಾವಿದ್ದೇವೆ, ಭಯಪಡದಿರಿ ಎಂದು ಹೇಳಿ ಧವಸ ಧಾನ್ಯ ಕೊಟ್ಟಿದ್ದಾರೆ. ಸ್ವಾಮೀಜಿಗಳಿಗೆ ನಾವು ಬೇಕು, ಸರ್ಕಾರಕ್ಕೆ ಬೇಡವಾ ಎಂದು ಪ್ರಶ್ನಿಸಿದರು.
  • < previous
  • 1
  • ...
  • 204
  • 205
  • 206
  • 207
  • 208
  • 209
  • 210
  • 211
  • 212
  • ...
  • 396
  • next >
Top Stories
ಆರೆಸ್ಸೆಸ್‌ ಗೀತೆ ಡಿಕೆಶಿ ವಿರುದ್ಧಕ್ರಮ ‘ಹೈ’ಗೆ ಬಿಟ್ಟಿದ್ದು: ಸತೀಶ್
ಮೋದಕ ಮೂಲದ ಕುತೂಹಲಕಾರಿ ಕಥೆ ಇಲ್ಲಿದೆ; ಗಣಪತಿಯ ಇಷ್ಟದ ನೈವೇದ್ಯವಾಗಿದ್ದು ಹೇಗೆ?
ಮಹೇಶ್ ಶೆಟ್ಟಿ ತಿಮರೋಡಿ ಮನೆ ಶೋಧದಲ್ಲಿ ಮಹತ್ವದ ಸಾಕ್ಷಿ ಲಭ್ಯ, ಚಿನ್ನಯ್ಯನ ಮೊಬೈಲ್ ವಶಕ್ಕೆ
ಇಂದಿನಿಂದ ಭಾರತದ ಮೇಲೆ ಶೇ.50 ಟ್ರಂಪ್‌ ತೆರಿಗೆ ಬಾಂಬ್‌ : ಯಾವ ವಸ್ತುಗಳ ಮೇಲೆ ಏಟು
ಶುಲ್ಕ ಕೊಟ್ಟರೆ ಪುರೋಹಿತರಿಂದ ಗಯಾ ದಲ್ಲಿ ಈಗ ಇ-ಪಿಂಡದಾನ ಸೇವೆ ಆರಂಭ!
Asianet
Follow us on
  • Facebook
  • Twitter
  • YT video
  • insta
  • whatsapp
  • About Us
  • Terms of Use
  • Privacy Policy
  • CSAM Policy
  • Complaint Redressal - Website
  • Compliance Report Digital
  • Investors
  • Language Editions
  • newsable
  • മലയാളം(malayalam)
  • தமிழ்(tamil)
  • ಕನ್ನಡ(kannada)
  • తెలుగు(telugu)
  • বাংলা(bangla)
  • हिन्दी(hindi)
  • मराठी(marathi)
  • ಕನ್ನಡಪ್ರಭ(kannadaprabha)
Follow us on
  • Facebook
  • Twitter
  • YT video
  • insta
  • whatsapp
  • Popular Categories
  • ಭಾರತ
  • ಪ್ರಪಂಚ
  • ವಿಶೇಷ
  • ಮನರಂಜನೆ
© Copyright 2024 Asianxt Digital Technologies Private Limited (Formerly known as Asianet News Media & Entertainment Private Limited) | All Rights Reserved