ಆಹಂಕಾರ ತ್ಯಜಿಸಿದರೆ ಉತ್ತಮ ದಾರಿಯಲ್ಲಿ ನಡೆಯಲು ಸಾಧ್ಯಚಳ್ಳಕೆರೆ: ನಮ್ಮಲ್ಲಿರುವ ಅಜ್ಞಾನ ಮತ್ತು ಆಹಂಕಾರವನ್ನು ತ್ಯಜಿಸಿದಾಗ ಮಾತ್ರ ನಾವು ಉತ್ತಮ ದಾರಿಯಲ್ಲಿ ನಡೆಯಲು ಸಾಧ್ಯವಾಗುತ್ತದೆ. ವೇದ, ಉಪನಿಷತ್ತುಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ ಧಾರ್ಮಿಕ ವಿಚಾರಧಾರೆಗಳನ್ನು ಅರ್ಥೈಸಿಕೊಳ್ಳುವಂತಹ ಅವಕಾಶಗಳು ಲಭಿಸುತ್ತವೆ. ದೈವ ಮತ್ತು ದೈವತ್ವವನ್ನು ಸಮಾನಾಗಿ ಕಾಣಬೇಕು. ನಾವೆಲ್ಲರೂ ಭಗವಂತನ ನಾಮಸ್ಮರಣೆಯಿಂದ ಮಾತ್ರ ಉತ್ತಮ ಜೀವನ ನಡೆಸಬಹುದು ಎಂದು ನರಹರಿ ಸದ್ಗುರುಪೀಠದ ವೈ.ರಾಜರಾಂಶಾಸ್ತ್ರಿ ತಿಳಿಸಿದರು.