ಇಲಾಖೆ ಅನುದಾನಗಳ ಬಳಸಿ, ಜನರಿಗೆ ಸೌಲಭ್ಯ ತಲುಪಿಸಿಕೃಷಿಗೆ ಉತ್ಪನ್ನಗಳು ಪೂರೈಕೆ, ರಸ್ತೆ, ವಿದ್ಯುತ್, ಸಾರಿಗೆ, ಹಾಸ್ಟೆಲ್ ನಿರ್ವಹಣೆ, ಶಿಕ್ಷಣ, ಅಂಗನವಾಡಿ ಕೇಂದ್ರಗಳಲ್ಲಿ ಅಗತ್ಯ ಸೌಲಭ್ಯಗಳ ಕಲ್ಪಿಸಬೇಕು. ಜಾನುವಾರುಗಳಿಗೆ ಚಿಕಿತ್ಸೆ ನೀಡಬೇಕು, ರಸ್ತೆಗಳ ಪಕ್ಕ ಸಸಿಗಳ ನೆಟ್ಟು ಪೋಷಿಸಬೇಕು. ಎಲ್ಲ ಇಲಾಖೆಗಳಲ್ಲೂ ಸರ್ಕಾರದಿಂದ ಸಿಗುವ ಅನುದಾನ ಬಳಸಿ, ಜನರಿಗೆ ಸೌಲಭ್ಯಗಳನ್ನು ಸಕಾಲಕ್ಕೆ ತಲುಪಿಸಬೇಕಿದೆ ಎಂದು ಶಾಸಕ ಡಿ.ಜಿ. ಶಾಂತನಗೌಡ ಹೊನ್ನಾಳಿಯಲ್ಲಿ ಸೂಚನೆ ನೀಡಿದ್ದಾರೆ.