ನೋಂದಣಿಗೊಂಡ ಖೇಣಿದಾರರು ಸಂಘಟಿತರಾಗಲಿ: ವೀರಭದ್ರಪ್ಪದಾವಣಗೆರೆ, ಶಿವಮೊಗ್ಗ, ಚಿತ್ರದುರ್ಗ ಜಿಲ್ಲೆಗಳಲ್ಲಿ ಅಡಕೆ ಖೇಣಿದಾರರ ಅಭಿವೃದ್ಧಿ ಸಂಘ ಸಂಘಟನೆಗೊಂಡು ನೋಂದಣಿ ಮಾಡಿಕೊಂಡಿದ್ದಾರೆ. ಈಗಾಗಲೇ ನೋಂದಣಿಗೊಂಡ ಖೇಣಿದಾರರು ಸಂಘಟಿತರಾದಾಗ ಮಾತ್ರ ಖೇಣಿದಾರರ ಕೆಲಸಕ್ಕೆ ಮಾನ್ಯತೆ ಸಿಗಲಿದೆ ಎಂದು ದಾವಣಗೆರೆ ಜಿಲ್ಲಾ ಖೇಣಿದಾರರ ಸಂಘದ ಅಧ್ಯಕ್ಷ ತಿಪ್ಪಗೊಂಡನಹಳ್ಳಿ ವೀರಭದ್ರಪ್ಪ ಹೇಳಿದ್ದಾರೆ.