ವಚನಗಳ ಅನುಷ್ಠಾನದಿಂದ ಸಮಸ್ಯೆಗಳ ನಿವಾರಣೆಆಧುನಿಕ ಸಮಾಜದಲ್ಲಿ ಆಸ್ತಿಗಾಗಿ, ಹಣಕ್ಕಾಗಿ, ಅಧಿಕಾರಕ್ಕಾಗಿ, ಜಾತಿಗಾಗಿ, ಧರ್ಮಕ್ಕಾಗಿ ಕದನಗಳು ಹೆಚ್ಚಾಗಿವೆ. ಈ ಎಲ್ಲಾ ಸಮಸ್ಯೆಗಳನ್ನು ಕಿತ್ತು ಹಾಕಲು ವಚನಗಳ ಅನುಷ್ಠಾನ ಮಾಡಬೇಕು. ಬಸವಾದಿ ಶರಣರ ವಚನಗಳು ನಮ್ಮ ಬದುಕಿನಲ್ಲಿ ಪಚನವಾದರೆ ಕದನಗಳು ಇರುವುದಿಲ್ಲ. ಬದಲಾಗಿ ಸ್ವರ್ಗ ನಿರ್ಮಾಣವಾಗುತ್ತದೆ ಎಂದು ವಿರಕ್ತಮಠದ ಡಾ.ಬಸವಪ್ರಭು ಸ್ವಾಮೀಜಿ ಹೇಳಿದರು.